Webdunia - Bharat's app for daily news and videos

Install App

ಇನ್ನುಮುಂದೆ ಮನೆಯಲ್ಲಿಯೇ ಕುಳಿತು ಹೊರಗೆ ಹೋದವರ ಬಗ್ಗೆ ಮಾಹಿತಿ ತಿಳಿಯಬಹುದು. ಅದು ಹೇಗೆ ಗೊತ್ತಾ?

Webdunia
ಮಂಗಳವಾರ, 7 ಮೇ 2019 (07:44 IST)
ಬಿಹಾರ್ : ಸಾಮಾನ್ಯವಾಗಿ ಯಾರಾದರೂ ಮನೆಯಿಂದ ಹೊರಗೆ ಹೋದಾಗ ಬರುವುದು ತಡವಾದರೆ ಅವರ ಬಗ್ಗೆ ಮನೆಯವರಿಗೆ ಚಿಂತೆಯಾಗುವುದು ಸಹಜ. ಹೇಗಿದ್ದಾರೋ?ಏನು ಮಾಡುತ್ತಿದ್ದಾರೋ? ಎಂದು ಕೊರಗುತ್ತಿರುತ್ತಾರೆ. ಆದರೆ ಇನ್ನುಮುಂದೆ ಹೊರಗೆ ಹೋದವರ ಬಗ್ಗೆ ಈ ರೀತಿ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ  ವ್ಯಕ್ತಿಯ ಆರೋಗ್ಯದ ಅಪ್ ​ಡೇಟ್​ಗಳನ್ನು ನೀಡವಂತಹ ಟೀ ಶರ್ಟ್ ಒಂದು ಇದೀಗ ಮಾರುಕಟ್ಟೆಗೆ ಬಂದಿದೆಯಂತೆ.




ಹೌದು. ಬಿಹಾರದ 17 ವರ್ಷ ವಯಸ್ಸಿನ ಹರ್ಷಿಲ್ ಆನಂದ್ ಎಂಬಾತ ಸ್ಮಾರ್ಟ್​ ಟಿ ಶರ್ಟ್​ವೊಂದನ್ನು ಪರಿಚಯಿಸಿದ್ದು, ಇದನ್ನು ಧರಿಸಿದ ವ್ಯಕ್ತಿಯ ರಕ್ತದೊತ್ತಡ, ಇಸಿಜಿ, ದೇಹದೊತ್ತಡ, ಉಸಿರಾಟ ಮತ್ತು ಎದೆ ಬಡಿತದ ಡೇಟಾವನ್ನು ಆತ ಸಾವಿರಾರು ಕಿಲೋ ಮೀಟರ್​ ದೂರವಿದ್ದರೂ  ತಿಳಿಯಬಹುದಂತೆ. ಈ ಟಿ ಶರ್ಟ್ ​ನಲ್ಲಿ ವಿಶೇಷವಾದ ಚಿಪ್ ​ವೊಂದನ್ನು ನೀಡಲಾಗಿದ್ದು, ಇದು ಪ್ರತಿ 5 ಸೆಕೆಂಡುಗಳಿಗೆ ಆರೋಗ್ಯದ ಡೇಟಾವನ್ನು ಅಪ್ ​ಲೋಡ್ ಮಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಪ್ಯಾನಿಕ್ ಬಟನ್​ ಒಂದನ್ನು ನೀಡಲಾಗಿದ್ದು, ಅಪಾಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಈ ಬಟನ್ ಒತ್ತಿದರೆ ನಿಮ್ಮ ಮಾಹಿತಿಯು ಟಿ ಶರ್ಟ್​ ಜೊತೆ ನೀಡಲಾದ ಡಿವೈಸ್ ​ಗೆ ತಲುಪುತ್ತದೆಯಂತೆ.


ಈ ಹೊಸ ವಿನ್ಯಾಸದ ಟೀಶರ್ಟ್ ಸಂಶೋಧನೆಗೆ ಹರ್ಷಿಲ್ ಜತೆ ಬಿ.ಟೆಕ್ ವಿದ್ಯಾರ್ಥಿ ರಂಜನ್ ಕುಮಾರ್, 10ನೇ ತರಗತಿ ಓದುತ್ತಿರುವ ರಾಜಸ್ತಾನದ ರೋಹಿತ್ ದಯಾನಿ, 12ನೇ ತರಗತಿ  ಓದುತ್ತಿರುವ ಜಾರ್ಖಂಡ್​ನ ಶ್ರೀಶಿತ್ ಪ್ರಾಮಾಣಿಕ್ ಸಹಾಯ ಮಾಡಿದ್ದಾರಂತೆ. ಈಗಾಗಲೇ ಈ ಗೆಳೆಯರು ವಿಕಿಬುಕ್ ಎಂಬ ಕಂಪೆನಿಯೊಂದನ್ನು ಹುಟ್ಟು ಹಾಕಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಫುಡ್​ ಆರ್ಡರ್​ ಮಾಡಲು ಅನಾಕೂಲವಾಗುವಂತಹ ಹೊಸ ಡಿವೈಸ್​ ವೊಂದನ್ನು ಕಂಡು ಹಿಡಿಯಲು ಈ ಗೆಳೆಯರು ಪ್ರಯೋಗ ನಡೆಸುತ್ತಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 
.

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಮತ್ತಷ್ಟು ಬೆಲೆ ಏರಿಕೆ

Gold Price today: ಮತ್ತೆ ಲಕ್ಷದತ್ತ ಚಿನ್ನದ ದರ

Glance AI App: ಆನ್ ಲೈನ್ ನಲ್ಲಿ ಡ್ರೆಸ್ ಖರೀದಿಸುವಾಗ ಟ್ರಯಲ್ ನೋಡುವುದು ಇನ್ನು ಸುಲಭ

Ranya Rao case: ಪರಮೇಶ್ವರ್ ಸಾಮಾನ್ಯರ ಮದುವೆಗೆ ಬಂದ್ರೂ 20 ಲಕ್ಷ ಗಿಫ್ಟ್ ಕೊಡ್ತಾರಾ

ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಎಂದು ನಾಮಕರಣವಾಗಿರುವುದರಿಂದ ಲಾಭವೇನುಮ ನಷ್ಟವೇನು

ಮುಂದಿನ ಸುದ್ದಿ
Show comments