Select Your Language

Notifications

webdunia
webdunia
webdunia
webdunia

ಭಾರತದ ಆರ್ಥಿಕತೆ ಸರಿದಾರಿಗೆ ತರದಿದ್ದರೆ ಭಾರತ ಬಿಜೆಪಿ ಮುಕ್ತವಾಗಲಿದೆ- ಸುಬ್ರಮಣಿಯನ್ ಸ್ವಾಮಿ ಆತಂಕ

ಭಾರತದ ಆರ್ಥಿಕತೆ ಸರಿದಾರಿಗೆ ತರದಿದ್ದರೆ ಭಾರತ ಬಿಜೆಪಿ ಮುಕ್ತವಾಗಲಿದೆ- ಸುಬ್ರಮಣಿಯನ್ ಸ್ವಾಮಿ ಆತಂಕ
ನವದೆಹಲಿ , ಬುಧವಾರ, 25 ಡಿಸೆಂಬರ್ 2019 (06:56 IST)
ನವದೆಹಲಿ : ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತರದಿದ್ದರೆ ಭಾರತ ಬಿಜೆಪಿ ಮುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.



ಈ ಬಗ್ಗೆ ಮಾತನಾಡಿದ ಅವರು, ಭಾರತದ ಆರ್ಥಿಕತೆ ಭೀಕರ ಸ್ಥಿತಿಯಲ್ಲಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಮುಕ್ತ ಭಾರತ ವಾಸ್ತವವಾಗುವ ಕಾಲ ಸನ್ನಿಹಿತವಾಗಲಿದೆ ಎಂದು ಹೇಳಿದ್ದಾರೆ.


ಪ್ರಧಾನಿ ಮೋದಿಯವರ ಸಲಹೆಗಾರರನ್ನು ತರಾಟೆಗೆ ತೆಗೆದುಕೊಂಡ ಅವರು, ಪ್ರಧಾನಿ ಮೋದಿಯವರ ಸಲಹೆಗಾರರು ಯಾರೆಂದು ನನಗೆ ತಿಳಿದಿಲ್ಲ. ಆದರೆ ಅವರು ಆರ್ಥಿಕತೆಯ ಬಗ್ಗೆ ಪ್ರಧಾನಿ ಮೋದಿಯವರಿಗೆ ಸತ್ಯ ಹೇಳುತ್ತಿಲ್ಲ. ಆರ್ಥಿಕತೆಯನ್ನು ಶೀಘ್ರದಲ್ಲಿಯೇ ಸರಿದಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ರಾಜೀನಾಮೆಗೆ ಸಿದ್ಧ ಎಂದ ಶಾಸಕ