Webdunia - Bharat's app for daily news and videos

Install App

India Pakistan: ಮುಂಬೈ ಮೇಲೆ ಉಗ್ರ ದಾಳಿಯಾದ ಎರಡೇ ವರ್ಷಕ್ಕೆ ಪಾಕಿಸ್ತಾನಕ್ಕೆ ಹಣ ನೀಡಿದ್ದ ಯುಪಿಎ ಸರ್ಕಾರ

Krishnaveni K
ಮಂಗಳವಾರ, 27 ಮೇ 2025 (11:00 IST)
Photo Credit: X
ನವದೆಹಲಿ: 2008 ರಲ್ಲಿ ಮುಂಬೈ ಮೇಲೆ ಪಾಕ್ ಪೋಷಿತ ಉಗ್ರರು ದಾಳಿ ಮಾಡಿ ನೂರಾರು ಜನರ ಸಾವಿಗೆ ಕಾರಣರಾಗಿದ್ದರು. ಇದಾದ ಎರಡೇ ವರ್ಷಕ್ಕೆ ಅಂದಿನ ಯುಪಿಎ ಸರ್ಕಾರ ಪಾಕಿಸ್ತಾನಕ್ಕೆ ನೆರೆ ಪರಿಹಾರವಾಗಿ 25 ಮಿಲಿಯನ್ ಡಾಲರ್ ಹಣ ನೀಡಿತ್ತು. ಈ  ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2008 ರಲ್ಲಿ ಮುಂಬೈನ ತಾಜ್ ಹೋಟೆಲ್ ಮತ್ತು ಇತರೆ ಸ್ಥಳದ ಮೇಲೆ ನಡೆದ ಉಗ್ರರ ದಾಳಿಯನ್ನು ಯಾವ ಭಾರತೀಯರೂ ಮರೆಯಲಾಗದು. ಸುಮಾರು 150 ಮಂದಿ ಅಂದಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಆಗ ಭಾರತ ಸರ್ಕಾರ ಈಗಿನಂತೆ ಪರಿಣಾಮಕಾರಿಯಾದ ಕ್ರಮ ಕೈಗೊಂಡಿರಲಿಲ್ಲ.

ಇದಾಗಿ ಎರಡೇ ವರ್ಷದಲ್ಲಿ ಅಂದರೆ 2010 ರಲ್ಲಿ ಪಾಕಿಸ್ತಾನ ನೆರೆ ಬಂದು ಸಂಕಷ್ಟಕ್ಕೀಡಾಗಿತ್ತು. ಆಗ ಯುಪಿಎ ಸರ್ಕಾರ ಪಾಕಿಸ್ತಾನಕ್ಕೆ 25 ಮಿಲಿಯನ್ ಡಾಲರ್ ಪರಿಹಾರ ಹಣ ಘೋಷಿಸಿತ್ತು. ನೆರೆಯ ರಾಷ್ಟ್ರ ಸಂಕಷ್ಟದಲ್ಲಿರುವಾಗ ಸಹಾಯ ಮಾಡುವುದರಿಂದ ಏಷ್ಯಾ ರಾಷ್ಟ್ರಗಳ ಬಲವರ್ಧನೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿತ್ತು. ಆಗ ವಿದೇಶಾಂಗ ಸಚಿವರಾಗಿದ್ದ ಎಸ್ಎಂ ಕೃಷ್ಣ ಸಂಸತ್ ನಲ್ಲಿ ಸಹಾಯ ಹಣ ಘೋಷಿಸುವ ವಿಡಿಯೋವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳ್ವಿಯಾ ಟ್ವೀಟ್ ಮಾಡಿದ್ದರು.

ಅಂದು ಪಾಕಿಸ್ತಾನದ ಬುದ್ಧಿ ಗೊತ್ತಿದ್ದೂ, ಮುಂಬೈ ದಾಳಿಯ ಆರೋಪಿ ಉಗ್ರ ಅಜ್ಮಲ್ ಕಸಬ್ ಇನ್ನೂ ವಶದಲ್ಲಿದ್ದಾಗಲೇ ಯುಪಿಎ ಸರ್ಕಾರ ಹಣ ಸಹಾಯ ಮಾಡಿತ್ತು. ಈಗ ಮೋದಿ ಸರ್ಕಾರ ಪರಿಣಾಮ ಕಾರಿ ಕ್ರಮಕೈಗೊಂಡರೂ ಕಾಂಗ್ರೆಸ್ ಅನುಮಾನಿಸುತ್ತಿದೆ ಎಂದು ಟೀಕಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bantwal Murder: ಮುಸ್ಲಿಮರ ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ, ರಾಜ್ಯಕ್ಕೆ ಹೊಸ ಹೋಂ ಮಿನಿಸ್ಟರ್ ಬರ್ತಾರಾ

Dr HS Venkateshmurthy: ಖ್ಯಾತ ಗೀತ ಸಾಹಿತಿ ಎಚ್ಎಸ್ ವೆಂಕಟೇಶ್ ಮೂರ್ತಿ ಇನ್ನಿಲ್ಲ

Karnataka Weather: ಈ ಆರು ಜಿಲ್ಲೆಗಳ ಜನರು ಹವಾಮಾನ ವರದಿ ತಪ್ಪದೇ ಗಮನಿಸಿ

West Bengal: ಪೋಷಕರನ್ನು ಕೊಂದು ಅನಾಥಶ್ರಮದಲ್ಲಿನ ಇಬ್ಬರು ಶಿಕ್ಷಕರನ್ನು ಕೊಂದ ವ್ಯಕ್ತಿ

Liberian ಹಡಗು ದುರಂತ: ಇದೊಂದು ವಿಪತ್ತು ಎಂದ ಕೇರಳ ಸರ್ಕಾರ

ಮುಂದಿನ ಸುದ್ದಿ
Show comments