Select Your Language

Notifications

webdunia
webdunia
webdunia
webdunia

ನವದೆಹಲಿಯಲ್ಲಿ ವಿಜೃಂಭಣೆಯ 68ನೇ ಗಣರಾಜ್ಯೋತ್ಸವ

ನವದೆಹಲಿಯಲ್ಲಿ ವಿಜೃಂಭಣೆಯ 68ನೇ ಗಣರಾಜ್ಯೋತ್ಸವ
ನವದೆಹಲಿ , ಗುರುವಾರ, 26 ಜನವರಿ 2017 (11:43 IST)
ನವದೆಹಲಿಯಲ್ಲಿ 68ನೇ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಾಲನೆ ನೀಡಿ, ರಾಜ್ಯೋತ್ಸವದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಶುಭ ಕೋರಿದರು.
ಗಣರಾಜ್ಯೋತ್ಸವದ ಅಂಗವಾಗಿ ವೇದಿಕೆಗೆ ಆಗಮಿಸಿದ ಪ್ರಣಬ್ ಮುಖರ್ಜಿ ಧ್ವಜಾರೋಹಣ ನೆರವೇರಿಸಿದರು. ನಂತರ ಕಾರ್ಯಕ್ರಮದ ಅಂಗವಾಗಿ ಪಥಸಂಚಲನ ಸೇರಿದಂತೆ ವಿಶೇಷ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
 
ಇದೇ ಸಂದರ್ಭದಲ್ಲಿ 3 ಉಗ್ರರನ್ನು ಹತ್ಯೆಗೈದು ಒಳನುಸುಳುವಿಕೆಯನ್ನು ತಡೆಗಟ್ಟಿ ಅಪ್ರತಿಮ ಸಾಹಸ ತೋರಿದ್ದ ಹುತಾತ್ಮ ಯೋಧ ಹವಾಲ್ದಾರ್ ಹಂಗಪನ್ ದಾದಾ ಅವರಿಗೆ ರಾಷ್ಟ್ರಪತಿ ಮುಖರ್ಜಿ ಅಶೋಕ ಚಕ್ರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
 
ಭಾರತೀಯ ಸೇನೆಯ ಎಂಐ-17 ಹೆಲಿಕಾಪ್ಟರ್ ಗಳು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದವರನ್ನು ರಂಜಿಸಿದವು. ಭಾರತೀಯ ಸೇನೆ ಸುಖೋಯಿ ಯುದ್ಧ ವಿಮಾನ ಸೇರಿದಂತೆ ಹಲವು ಯುದ್ಧ ವಿಮಾನಗಳು ತಮ್ಮ ಕಾರ್ಯದಕ್ಷತೆಯನ್ನು ಜಗತ್ತಿಗೆ ಎತ್ತಿ ತೋರಿಸಿದವು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಶುದ್ಧ ಕುಡಿಯುವ ನೀರು ಪೂರೈಕೆಗೆ ಸರ್ಕಾರದ ಆದ್ಯತೆ