Webdunia - Bharat's app for daily news and videos

Install App

ಸೋಂಕು ಹೆಚ್ಚಾಗುವ ಸಾಧ್ಯತೆ: 2 ಲಕ್ಷ ವೆಂಟಿಲೇಟರ್ ಹಾಸಿಗೆ ಸಿದ್ದಪಡಿಸಿದ ದೆಹಲಿ ಸರ್ಕಾರ

Webdunia
ಮಂಗಳವಾರ, 14 ಸೆಪ್ಟಂಬರ್ 2021 (07:32 IST)
ದೆಹಲಿ ಸರ್ಕಾರವು ನಡೆಸಿದ ಸಮೀಕ್ಷೆಯಲ್ಲಿ 23% ಸೋಂಕಿತರು ಐಸಿಯು ಆಸ್ಪತ್ರೆಗೆ ದಾಖಲಾಗುವ ನಿರೀಕ್ಷೆಯಲ್ಲಿದ್ದು, ಹಿಂದಿನ ಅಲೆಯಲ್ಲಿ ಈ ರೇಟಿಂಗ್ 20% ರಷ್ಟಿತ್ತು. "ಮೊದಲು, ಇದು 20% ಆಗಿತ್ತು ಆದರೆ ಆಗ ಎಲ್ಲರೂ ಐಸಿಯುನಲ್ಲಿ ಇರಲಿಲ್ಲ. ಇದು ಡೆಲ್ಟಾದಂತಹ ರೂಪಾಂತರ ಆಗಿದ್ದರೆ ಎನ್ನುವ ಅನುಮಾನ.

ಹಬ್ಬದ  ನಂತರ ಕೋವಿಡ್ -19 ಪ್ರಕರಣಗಳ ಏರಿಕೆಯಾಗಬಹುದು ಎಂದು ನಿರೀಕ್ಷಿಸಿ, ದೆಹಲಿ ಸರ್ಕಾರವು ತನ್ನ ಸಿದ್ಧತೆಯ ಭಾಗವಾಗಿ ಐಸಿಯುಗಳಲ್ಲಿ ವೆಂಟಿಲೇಟರ್ಗಳೊಂದಿಗೆ ಎರಡು ಲಕ್ಷ ಹಾಸಿಗೆಗಳನ್ನು ಮತ್ತು ಹೆಚ್ಚುವರಿ 40,000 ಹಾಸಿಗೆಗಳನ್ನು ತಯಾರು ಮಾಡಿಟ್ಟುಕೊಂಡಿದೆ. ಎರಡು ಲಕ್ಷ ಬೆಡ್ಗಳಲ್ಲಿ, 50% ವೆಂಟಿಲೇಟರ್ ಹೊಂದಿದ ಹಾಸಿಗೆಗಳನ್ನು ಈಗಾಗಲೇ ಸನ್ನದ್ದವಾಗಿ ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ದೆಹಲಿಯಲ್ಲಿ ಎರಡನೇ ಕೋವಿಡ್ -19 ಅಲೆಯ ಸಮಯದಲ್ಲಿ ಒಂದಾದ ಮೇಲೆ ಒಂದರಂತೆ ನಡೆದ ಘೋರ ದೃಶ್ಯಗಳ ನಂತರ, ದುರಂತದ ಪುನರಾವರ್ತನೆಯನ್ನು ತಡೆಯಲು ರೋಗಿಗಳಿಗೆ ಉತ್ತಮ ವ್ಯವಸ್ಥೆಗಾಗಿ ಸರ್ಕಾರ ಸಜ್ಜಾಗಿದೆ ಎಂದು ಹೇಳಲಾಗಿದೆ.
ಎರಡನೇ ಅಲೆಯ ಸಮಯದಲ್ಲಿ ಮತ್ತು ನಂತರ ನಡೆಸಿದ ಅಧ್ಯಯನದ ಆಧಾರದ ಮೇಲೆ 23% ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಸರ್ಕಾರ ಯೋಜನೆ ರೂಪಿಸಿದೆ. ಆದಾಗ್ಯೂ, ವೈರಸ್ನ ಡೆಲ್ಟಾ ರೂಪಾಂತರದ ಹೆಚ್ಚಿಗೆ ಹರಡುತ್ತಿರುವ ಸ್ವಭಾವವನ್ನು ಗಮನಿಸಿದರೆ ಸೋಂಕಿನ ಪ್ರಮಾಣ ಸಾಕಷ್ಟು ಅಧಿಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
"ಆರೋಗ್ಯ ರಕ್ಷಣೆಯ ಮೂಲಸೌಕರ್ಯದ ಅವಶ್ಯಕತೆಗಾಗಿ ಮೆಟ್ರಿಕ್ ಎರಡನೇ ಅಲೆಯ ವೇಳೆ ಉಂಟಾದ ಆಸ್ಪತ್ರೆ ಪ್ರವೇಶ ದರವನ್ನು ಆಧರಿಸಿ ಈ ಸಿದ್ದತೆ ಮಾಡಿಕೊಳ್ಳಲಾಗಿದೆ. ಹಿಂದಿನ ಬಾರಿ ಸೋಂಕು ಉಲ್ಬಣಗೊಳ್ಳುವಿಕೆಯ ಸಮಯದಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯು ಹೆಚ್ಚಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರತಿ ಜಿಲ್ಲಾ ಆಸ್ಪತ್ರೆಯು ಕನಿಷ್ಠ ಐದು ಹೆಚ್ಚು ವೆಂಟಿಲೇಟರ್ಗಳನ್ನು ಈ ಬಾರಿ ಪಡೆದುಕೊಳ್ಳುತ್ತವೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಿತರಣೆಯನ್ನು ಆರಂಭಿಸಲಾಗಿದೆ "ಎಂದು ಹಿರಿಯ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮುಂದಿನ ಸುದ್ದಿ
Show comments