Webdunia - Bharat's app for daily news and videos

Install App

‘TikTok’ಅಕ್ರಮ ಸಂಬಂಧ ಬಯಲು!

Webdunia
ಗುರುವಾರ, 11 ನವೆಂಬರ್ 2021 (11:36 IST)
2ನೇ ಪತ್ನಿಯಾಗಿದ್ದ ನೇತ್ರಾ ಎಂಬುವರು ಮಧ್ಯರಾತ್ರಿ ತುಮಕೂರು ರಸ್ತೆಯ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ,
ತನ್ನ ಗಂಡ ಪಾಲರ್ ಸ್ವಾಮಿ ಅಲಿಯಾನ್ ಸ್ವಾಮಿ ರಾಜ್ (50) ಅವರನ್ನು ಕೊಂದಿರುವುದಾಗಿ ಪೊಲೀಸರ ಎಂದು ಶರಣಾಗಿದ್ದರು. ಈಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ನನ್ನ ಗಂಡ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸೆಕ್ಸ್ ವಿಚಾರವಾಗಿ ಅತಿರೇಕದ ವರ್ತನೆಯಿಂದ ಬೇಸತ್ತು ಕೊಲೆ ಮಾಡಿರೋದಾಗಿ ಪೊಲೀಸರ ಎದುರು 2ನೇ ಹೆಂಡತಿ ನೇತ್ರಾ ಹೇಳಿಕೊಂಡಿದ್ದರು. ಆದರೆ ಅಸಲಿ ಸಂಗತಿ ಈಗ ಬಯಲಾಗಿದೆ.
ಮಾದನಾಯಕನಹಳ್ಳಿ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಕಾರ್ಯ ನಡೆಸಿ ಪ್ರಕರಣವನ್ನು ಬೇಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ ಕೊಲೆಗೆ ಸಹಕರಿಸಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಿಯಕರ ಹಾಗೂ ಅಕ್ಕನ ಮಗನ ಸಹಾಯದೊಂದಿಗೆ ನೇತ್ರಾ ಗಂಡನನ್ನು ಕೊಲೆ ಮಾಡಿರುವುದು ಬಯಲಾಗಿದೆ. ಕೊಲೆಗೆ ಸಹಕರಿಸಿದ ಪ್ರಿಯಕರ ಭರತ್ ಅಲಿಯಾನ್ ಅಚ್ಚು( 30) ಹಾಗೂ ನೇತ್ರಾ ಅಕ್ಕನ ಮಗ ವಿಜಯ್ನ ಪೊಲೀಸರು ಬಂಧಿಸಿದ್ದಾರೆ. ಭರತ್ ಕೆ.ಆರ್.ಪುರಂ ಬಿದರನಹಳ್ಳಿಯ ನಿವಾಸಿ ಹಾಗೂ ವಿಜಯ್ ಸುಂಕದಕಟ್ಟೆಯಲ್ಲಿ ನೆಲೆಸಿದ್ದ.
ಕಳೆದೊಂದು ವರ್ಷದ ಹಿಂದೆ ಟಿಕ್ ಟಾಕ್ ನಿಂದ ಭರತ್ ಮತ್ತು ನೇತ್ರಾ ಪರಿಚಿತರಾಗಿದ್ದರು. ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ವಾರದ ಹಿಂದೆ ಸ್ವಾಮಿರಾಜ್ ಮರ್ಡರ್ ಗೆ ಸ್ಕೆಚ್ ಹಾಕಿದ್ದ ನೇತ್ರಾ, ಹತ್ಯೆಗೆ ಲಾಂಗ್ ಖರೀದಿಸಲು ಕೆ.ಆರ್.ಮಾರುಕಟ್ಟೆಗೆ ಹೋಗಿದ್ದರು. ಲಾಂಗ್ ಬದಲು ರಿಂಚ್ ಖರೀದಿಸಿ ತಂದಿದ್ದರು.
ಪ್ರಿಯಕರ ಭರತ್ ಮತ್ತು ವಿಜಯ್ ನನ್ನು ಬಚಾವ್ ಮಾಡಲು ನೇತ್ರಾ ಪೊಲೀಸರಿಗೆ ಶರಣಾಗಿದ್ದರು. ವಕೀಲರನ್ನ ಹುಡುಕಿ ಜಾಮೀನು ಪಡೆಯಲು ವಿಜಯ್ ಗೆ 50 ಸಾವಿರ ಹಣವನ್ನು ಸಹ ನೇತ್ರಾ ನೀಡಿದ್ದರು. ಆದ್ರೆ ಪೊಲೀಸರ ತನಿಖೆ ವೇಳೆ ಭರತ್ ಮತ್ತು ವಿಜಯ್ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ರಿಂಚ್ ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತ ರಾಜ್ 25 ವರ್ಷಗಳ ಹಿಂದೆ ಟಿ.ಆರ್.ಸತ್ಯಕುಮಾರಿ ಎಂಬುವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಬಳಿಕ ಬ್ಯೂಟಿಷಿಯನ್ ನೇತ್ರಾ ಅವರ ಪರಿಚಯವಾಗಿ 6 ವರ್ಷಗಳ ಹಿಂದೆ 2ನೇ ವಿವಾಹವಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ದರು: ಆರಗ ಜ್ಞಾನೇಂದ್ರ

ರಾಹುಲ್ ಗಾಂಧಿ ಅವರ ದಿಟ್ಟ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಸಿಎಂ ಡಿ.ಕೆ. ಶಿವಕುಮಾರ್

ಮತಗಳ್ಳತನ, ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕತೆಯಿಲ್ಲ: ಸಿದ್ದರಾಮಯ್ಯ

ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ: ಪ್ರಧಾನಿ, ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಗುಡುಗಿದ ರಾಹುಲ್‌

ಧರ್ಮಸ್ಥಳ: ಕಳೇಬರಹ ಶೋಧ ಪ್ರಕರಣಕ್ಕೆ ಹೊಸ ಟ್ವಿಸ್ಟ್‌, 13ನೇ ಪಾಯಿಂಟ್ ಬಿಟ್ಟು ಹೊಸ ಸ್ಥಳದತ್ತ ಎಸ್‌ಐಟಿ

ಮುಂದಿನ ಸುದ್ದಿ