Select Your Language

Notifications

webdunia
webdunia
webdunia
webdunia

ದಲಿತರಿಗೆ ನಾನು ದೇವತೆಯಂತೆ, ನನ್ನ ಅಪಮಾನ ದಲಿತರು ಸಹಿಸೋಲ್ಲ: ಮಾಯಾವತಿ

ಬಿಎಸ್‌ಪಿ
ನವದೆಹಲಿ , ಗುರುವಾರ, 21 ಜುಲೈ 2016 (20:10 IST)
ದಲಿತರು ಕೇವಲ ನನ್ನನ್ನು ಸಹೋದರಿಯೆಂದು ಭಾವಿಸುವುದಿಲ್ಲ. ದೇವತೆಯಂತೆ ಪೂಜಿಸುತ್ತಾರೆ. ದೇವತೆಗೆ ಅಪಮಾನ ಮಾಡಿದಲ್ಲಿ ದೇಶದ ದಲಿತರು ಸಹಿಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. 
 
ನನ್ನನ್ನು ವೇಶ್ಯೆಗಿಂತಲೂ ಕೀಳು ಎಂದು ಜರಿದ ಬಿಜೆಪಿ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಬಿಜೆಪಿ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
 
ದೇಶದ ದಲಿತರು, ಶೋಷಿತರಿಗೆ ನನಗೆ ಅಪಮಾನ ಮಾಡಿರುವುದು ಸಹಿಸಲು ಸಾಧ್ಯವಾಗುತ್ತಿಲ್ಲ. ಉತ್ತರಪ್ರದೇಶಾದ್ಯಂತ ಜನತೆ ಬೀದಿಗಳಿದಿದ್ದಾರೆ. ಆದರೆ, ನಾನು ಯಾರನ್ನೂ ಬೀದಿಗೆ ಇಳಿಯುವಂತೆ ಸಲಹೆ ನೀಡಿಲ್ಲ ಎಂದು ತಿಳಿಸಿದ್ದಾರೆ.
 
ಸ್ವಾತಂತ್ರ್ಯ ಬಂದು 69 ವರ್ಷಗಳು ಗತಿಸಿದರೂ ದಲಿತರಿಗೆ ಅರ್ಧದಷ್ಟು ಸಾಮಾಜಿಕ-ಆರ್ಥಿಕ ಲಾಭಗಳು ದೊರೆತಿಲ್ಲ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಯಾವ ಸರಕಾರಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಗುಡುಗಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿವಾಲ್‌ರಿಂದ ಗೋವಾ ವಿಧಾನಸಭೆ ಚುನಾವಣೆಗೆ ರಣತಂತ್ರ