Select Your Language

Notifications

webdunia
webdunia
webdunia
webdunia

ಹಾವು ಕಚ್ಚಿದ್ದ ವ್ಯಕ್ತಿ ಒಟ್ಟಿಗೇ ಸಾಯಲು ಹೆಂಡತಿಯನ್ನ ಕಚ್ಚಿದ..!

ಹಾವು ಕಚ್ಚಿದ್ದ ವ್ಯಕ್ತಿ ಒಟ್ಟಿಗೇ ಸಾಯಲು ಹೆಂಡತಿಯನ್ನ ಕಚ್ಚಿದ..!
ಪಾಟ್ನಾ , ಸೋಮವಾರ, 19 ಜೂನ್ 2017 (17:34 IST)
ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಪತ್ನಿ ಜೊತೆ ಒಟ್ಟಿಗೆ ಸಾಯಲು ಪತ್ನಿಯನ್ನ ಕಚ್ಚಿರುವ ಘಟನೆ ಬಿಹಾರದ ಸಮಷ್ಠಿಪುರ್ ಜಿಲ್ಲೆ ಬಿರಸಿಂಗ್ ಪುರ್`ನಲ್ಲಿ ನಡೆದಿದೆ.

ಶಂಕರ್ ರಾಯ್ ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ವಿಷಸರ್ಪವೊಂದು ಕಚ್ಚಿದೆ. ಬೆಳಗ್ಗೆ ಎದ್ದ ಶಂಕರ್`ಗೆ ಹಾವು ಕಚ್ಚಿರುವುದು ಗಮನಕ್ಕೆ ಬಂದಿದೆ. ಆದರೆ, ಕಾಲ ಮೀರಿದ್ದರಿಂದ ತಾನು ಬದುಕುವುದಿಲ್ಲ ಎಂದು ಶಂಕರ್`ಗೆ ಗೊತ್ತಾಗಿದೆ. ಕೂಡಲೇ ಹೆಂಡತಿ ಬಳಿಗೆ ತೆರಳಿದ ಶಂಕರ್, ನಿನ್ನನ್ನ ಬಿಟ್ಟು ತೆರಳಲು ನನಗೆ ಇಷ್ಟವಿಲ್ಲ. ಒಟ್ಟಿಗೆ ಸಾಯೋಣವೆಂದು ಪತ್ನಿ ಕೈಗೆ ಕಚ್ಚಿದ್ದಾನೆ.

ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯತಾದರೂ ಶಂಕರ್ ರಾಯ್ ಮೃತಪಟ್ಟಿದ್ದಾರೆ. ಪತ್ನಿ ಅಮಿರಿದೇವಿಯನ್ನ ವೈದ್ಯರು ಉಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪತ್ನಿ ಅಮಿರಿದೇವಿ, ಅಂದು ನನ್ನ ಬಳಿಗೆ ಬಂದ ಪತಿ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆ. ಒಟ್ಟಿಗೆ ಸಾಯೋಣವೆಂದರು. ನಾನು ನನ್ನ ಪತಿಯ ಆಸೆಗೆ ಒಪ್ಪಿದೆ. ಬಳಿಕ ನನ್ನ ಕೈ ಕಚ್ಚಿದರು ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಲಿತನೆಂಬ ಕಾರಣಕ್ಕೆ ರಾಮಾನಾಥ್ ಆಯ್ಕೆ ಮಾಡಿದ್ರೆ ತಪ್ಪು: ಜಿ.ಪರಮೇಶ್ವರ್