Webdunia - Bharat's app for daily news and videos

Install App

ಭಾರಿ ಮೊತ್ತದ ಪರಿಹಾರ: ಗ್ರಾಮದಲ್ಲಿರುವವರೆಲ್ಲ ಕರೋಡ್‌ಪತಿಗಳು

Webdunia
ಸೋಮವಾರ, 11 ಡಿಸೆಂಬರ್ 2023 (12:29 IST)
ಕಳೆದ ಕೆಲ ದಿನಗಳ ಹಿಂದೆ ಖೋರಾಜ್ ಗ್ರಾಮದಲ್ಲಿ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ ಗ್ರಾಮಸ್ಥರಿಗೆ ಭೂಮಿ ಪರಿಹಾರವಾಗಿ 150 ಕೋಟಿ ರೂಪಾಯಿಗಳ ಚೆಕ್ ವಿತರಿಸಿದೆ. ಗ್ರಾಮದಲ್ಲಿರುವ ಹೆಚ್ಚಿನ ಭೂಮಿ ಮಹಿಳೆಯರ ಹೆಸರಿನಲ್ಲಿರುವುದರಿಂದ 1 ಕೋಟಿ ರೂಪಾಯಿಗಳಿಂದ 6 ಕೋಟಿ ರೂಪಾಯಿಗಳವರೆಗೆ ಪರಿಹಾರ ಪಡೆದಿದ್ದಾರೆ.
 
ಗುಜರಾತ್‌ನ ಕೈಗಾರಿಕೋದ್ಯಮ ನಿಗಮ ಭೂಸ್ವಾಧಿನಕ್ಕಾಗಿ ನೀಡಿದ ಭಾರಿ ಮೊತ್ತದ ಪರಿಹಾರ ರಾತ್ರೋರಾತ್ರಿ ಇವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ. ಇವರಲ್ಲಿ 117 ಮಹಿಳೆಯರಿದ್ದಾರೆ.
 
ಗುಜರಾತ್‌ನ ಸನಂದಾ ಬಳಿಯ ಖೋರಾಜ್‌ ಗ್ರಾಮವೊಂದರಲ್ಲಿ 117 ಮಹಿಳೆಯರು ಕೋಟ್ಯಾಧಿಪತಿಗಳಿದ್ದಾರೆ ಎಂದರೆ ಯಾರು ನಂಬುವುದಿಲ್ಲ ಅಲ್ಲವಾ? ಇದು ಸತ್ಯ.
 
ಗ್ರಾಮದ ಕಲ್ಯಾಣಿ ಜಾಧವ್ (32)ಎನ್ನುವ ಮಹಿಳೆ 1.85 ಕೋಟಿ ರೂಪಾಯಿಗಳ ಪರಿಹಾರ ಚೆಕ್ ಪಡೆದಿದ್ದಾರೆ. ಆಕೆಯ ತಾಯಿ ಲೀಲಾ(56) 2.43 ಕೋಟಿ ರೂಪಾಯಿಗಳ ಚೆಕ್ ಪಡೆದಿದ್ದಾರೆ. ತಂದೆ ರಾಮಸಿಂಗ್ 3.5 ಕೋಟಿ ರೂಪಾಯಿಗಳ ಚೆಕ್ ಪಡೆದಿದ್ದಾರೆ.
 
ಕೃಷಿ ಉದ್ಯಮವನ್ನು ಆರಂಭಿಸಲು ಪರಿಹಾರದ ಹಣವನ್ನು ಬಳಸಿಕೊಳ್ಳುವಂತೆ ತಂದೆ ರಾಮಸಿಂಗ್ ಮುಕ್ತ ಪ್ರೋತ್ಸಾಹ ನೀಡಿದ್ದಾರೆ ಎಂದು ಕಲ್ಯಾಣಿ ಜಾಧವ್ ಸಂತಸ ವ್ಯಕ್ತಪಡಿಸಿದ್ದಾರೆ.
 
ಹಣವನ್ನು ಹೂಡಿಕೆ ಮಾಡಲು ಪತಿ ರಾಮಸಿಂಗ್ ಅವರೊಂದಿಗೆ ಸ್ಥಳವನ್ನು ಗುರುತಿಸಲಾಗಿದ್ದು, ಮುಂದಿನ ಪೀಳಿಗೆಗಾಗಿ ಹಣವನ್ನು ಸುರಕ್ಷಿತವಾಗಿಡುವುದು ಕೂಡಾ ಅಗತ್ಯವಾಗಿದೆ. ಹಣವನ್ನು ಖರ್ಚು ಮಾಡುವುದು ಸುಲಭ. ಆದರೆ, ಸಂಪಾದಿಸುವುದು ಕಷ್ಟವಾಗಿದೆ. ಹಣವನ್ನು ಎಚ್ಚರಿಕೆಯಿಂದ ಹೂಡಿಕೆ ಮಾಡುವುದು ಅಗತ್ಯವಾಗಿದೆ ಎಂದು ತಾಯಿ ಲೀಲಾ ಹೇಳಿದ್ದಾರೆ.
 
ಮತ್ತೊಬ್ಬ ವಿಧುವಾ ಮಹಿಳೆ ಜೋತ್ಸಾನಾ ಚಾವ್ಡಾ(45)ಗೆ ಎರಡು ಮಕ್ಕಳಿದ್ದು ಭೂಮಿ ಪರಿಹಾರವಾಗಿ 1.21 ಕೋಟಿ ರೂಪಾಯಿಗಳ ಪರಿಹಾರ ಪಡೆದಿದ್ದಾರೆ.ನನ್ನ ಮಗನಿಗೆ ಸುವಿ ಕಾರು ಖರೀದಿಸುವುದು ತುಂಬಾ ಇಷ್ಟ. ಆದರೆ, ನಾನು ಎಚ್ಚರಿಕೆಯಿಂದ ಹೂಡಿಕೆ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸುತ್ತೇನೆ. ಭೂಮಿ ಪರಿಹಾರದಿಂದ ಬಂದ ಹಣ ನನ್ನ ಜವಾಬ್ದಾರಿಗಳನ್ನು ಈಡೇರಿಸಲು ನೆರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಈಗಾಗಲೇ 15 ಮಹಿಳೆಯರು 1 ಕೋಟಿ ರೂಪಾಯಿಗಳಷ್ಟು ಹಣವನ್ನು ಸ್ಥಿರ ಠೇವಣಿಯಲ್ಲಿರಿಸಿದ್ದಾರೆ.ಸೆಜಾಲ್ ಮೋದಿ ಎನ್ನುವ ಮಹಿಳೆಗೆ 2.31 ಕೋಟಿ ರೂಪಾಯಿಗಳ ಪರಿಹಾರ ಬಂದಿದ್ದು,ಗ್ರಾಮದಲ್ಲಿ ಸಮುದಾಯ ಭವನ ಮತ್ತು ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವುದಾಗಿ ಹೇಳಿ ಜನಪರ ಕಾಳಜಿ ಮೆರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments