Select Your Language

Notifications

webdunia
webdunia
webdunia
webdunia

ಜವರಾಯನಾಗಿ ಬಂದ ಲಾರಿ: 12 ಸಾವು

ಭೀಕರ ಅಪಘಾತ
ಕೊಪ್ಪಳದಲ್ಲಿ ಸೋಮವಾರ ಸಂಜೆ ಭೀಕರ ಅಪಘಾತ ನಡೆದಿದ್ದು 12 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲಗೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿ ಮತ್ತು ಟಂಟಂ ನಡುವೆ ಡಿಕ್ಕಿ ಸಂಭವಿಸಿದ್ದು ಟಂಟಂ ವಾಹನದಲ್ಲಿದ್ದ 12 ಜನರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. 
 
ಟಂಟಂನಲ್ಲಿ ಒಟ್ಟು 16 ಜನರಿದ್ದರು. ಮೃತರನ್ನು ಅನ್ನಪೂರ್ಣಮ್ಮ, ಮಿರಾಜಾನಾಬಿ, ನಿರಂಜನಿ, ಶಿವಮೂರ್ತಿ, ವೀರಪ್ಪ, ಗಂಗಮ್ಮ , ನಾಗವೇಣಿ , ಕುಸುಮ, ಆಶಾ, ಬೀಬಿಜಾನ್, ಲಕ್ಷ್ಮಿ, ಸರೋಜಾ ಎಂದು ಗುರುತಿಸಲಾಗಿದ್ದು ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ಕೋಳಿಪೇಟೆ ಹಾಗೂ ನೇಕಾರ ನಗರದ ನಿವಾಸಿಗಳೆಂದು ಹೇಳಲಾಗುತ್ತಿದೆ. 
 
ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಟಂಟಂ ವಾಹನದಲ್ಲಿದ್ದವರು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದು, ಕೊಪ್ಪಳ ನಗರದಲ್ಲಿ ನಡೆದ ಮದುವೆಯೊಂದಕ್ಕೆ ಆಗಮಿಸಿದ್ದರು. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada