Webdunia - Bharat's app for daily news and videos

Install App

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಹಿಂದೂ, ಮುಸ್ಲಿಂ ನಾಯಕರ ಚರ್ಚೆ

Webdunia
ಮಂಗಳವಾರ, 31 ಮೇ 2016 (14:10 IST)
ಬಾಬ್ರಿಮಸೀದಿ- ರಾಮ ಜನ್ಮಭೂಮಿ ವಿವಾದವನ್ನು ಸಂಧಾನ, ಶಾಂತಿಯುತದ ಮೂಲಕ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಹಿಂದೂ ಮತ್ತು ಮುಸ್ಲಿಂ ನಾಯಕರು ಇಂದು ಸಭೆ ಸೇರಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಆಲ್ ಇಂಡಿಯಾ ಆಕಾಡಾ ಪರಿಷತ್‌ನ ನೂತನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ, ಬಾಬ್ರಿ ಮಸೀದಿ ಪ್ರಕರಣದಲ್ಲಿ ಏಕೈಕ ದೂರದಾರರಾಗಿರುವ ಹಶೀಮ್ ಅನ್ಸಾರಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
 
ನರೇಂದ್ರ ಗಿರಿ ಮತ್ತು ಇತರ ಸಾಧು ಸಂತರು ಸುಮಾರು ಅರ್ಧ ಗಂಟೆ ಕಾಲ ಅನ್ಸಾರಿಯವರೊಂದಿಗೆ ಮಾತುಕಚೆ ನಡೆಸಿ ಸಂಧಾನ ಸೂತ್ರಕ್ಕಾಗಿ ಪ್ರಯತ್ನ ನಡೆಸಿದ್ದಾರೆ.
 
ಬಾಬ್ರಿ ಮಸೀದಿ ಮತ್ತು ರಾಮ ಜನ್ಮಭೂಮಿ ವಿವಾದವನ್ನು ನ್ಯಾಯಾಲಯದಿಂದ ಹೊರಗೆ ಸಂಧಾನ ಮತ್ತು ಶಾಂತಿಯ ಮೂಲಕ ಉಭಯ ಸಮುದಾಯಗಳಿಗೂ ಒಪ್ಪಿಗೆಯಾಗುವಂತಹ ಚರ್ಚೆಗೆ ನಡೆಸಲಾಗುತ್ತಿದೆ. ಸುಪ್ರೀಂಕೋರ್ಟ್ ಕೂಡಾ ಪ್ರತಿನಿತ್ಯ ಕೇಸ್ ವಿಚಾರಣೆಗೆ ತೆಗೆದುಕೊಂಡು ಶೀಘ್ರವೇ ತೀರ್ಪು ನೀಡಲಿ ಎಂದು ನರೇಂದ್ರ ಗಿರಿ ಹೇಳಿದ್ದಾರೆ.   
 
ಹಾಶೀಂ ಅನ್ಸಾರಿ ಮಾತನಾಡಿ, ಬಾಬ್ರಿ ಮಸೀದಿ ಮತ್ತು ರಾಮ ಜನ್ಮಭೂಮಿ ವಿವಾದವನ್ನು ಉಭಯ ಸಮುದಾಯಗಳಿಗೂ ಸಮ್ಮತವಾಗುವಂತಹ ರೀತಿಯಲ್ಲಿ ಪರಿಹರಿಸಬೇಕು ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ ಎಂದು ತಿಳಿಸಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಇಂದಿನ ಅಡಿಕೆ, ಕಾಳುಮೆಣಸು ಮಾರುಕಟ್ಟೆ ದರ ಹೇಗಿದೆ ನೋಡಿ

Gold Price: ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್, ಇಂದಿನ ಬೆಲೆ ಎಷ್ಟು ನೋಡಿ

ತುರ್ತು ಪರಿಸ್ಥಿತಿಯ ಕರಾಳ ದಿನಗಳ ಸಂಬಂಧ ಅಭಿಯಾನ: ಸಿ.ಟಿ.ರವಿ

ಕಾಂಗ್ರೆಸ್, ಭ್ರಷ್ಟಾಚಾರ ಎರಡೂ ಒಬ್ಬರ ಬಿಟ್ಟು ಇನ್ನೊಬ್ಬರಿರಲ್ಲ: ಸಿಟಿ ರವಿ

ನಮಗೂ ಕುಟುಂಬವಿದೆ, ಜೀವನವಿದೆ ಬ್ಯಾನ್ ಮಾಡ್ಬೇಡಿ: ಬೈಕ್ ಟ್ಯಾಕ್ಸಿವಾಲಗಳ ಅಳಲು

ಮುಂದಿನ ಸುದ್ದಿ
Show comments