Select Your Language

Notifications

webdunia
webdunia
webdunia
webdunia

ಮದುವೆ ನಿರಾಕರಣೆ: ಯುವತಿಗೆ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಯುವಕ

ಮದುವೆ ನಿರಾಕರಣೆ:  ಯುವತಿಗೆ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಯುವಕ
ನವದೆಹಲಿ , ಸೋಮವಾರ, 29 ಆಗಸ್ಟ್ 2016 (13:39 IST)
ತನ್ನ ಮದುವೆ ಪ್ರಪೋಸಲ್ ನಿರಾಕರಿಸಿದ 25 ವರ್ಷದ ಯುವತಿಯ ಮೈಗೆ ಯುವಕನೊಬ್ಬ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ವಾಯವ್ಯ ದೆಹಲಿಯ ಬಾಲ್ಸ್‌ವಾ ಡೇರಿ ಪ್ರದೇಶದಲ್ಲಿ ಸಂಭವಿಸಿದೆ. ಆರೋಪಿ ಅಭಿಷೇಕ್ ತನ್ನ ಸ್ನೇಹಿತರಾದ ವಿಜಯ್, ಕರಣ್ ಮತ್ತಿತರರ ಜತೆ ಸೇರಿಕೊಂಡು ಸಂತ್ರಸ್ತೆಯ ಮನೆಗೆ ತೆರಳಿ ಯುವತಿಯ ಬಂಧುಗಳನ್ನು ರಾಡ್‌ಗಳಿಂದ ಥಳಿಸಲಾರಂಭಿಸಿದರು.
 
ಅಭಿಶೇಕ್‌ನ ನಾಲ್ಕೈದು ಚಿಕ್ಕಪ್ಪಂದಿರು ಮತ್ತು ಸ್ನೇಹಿತರು ಜತೆಗೂಡಿದ್ದರು. ಯುವತಿಗೆ ಅಭಿಷೇಕ್‌ ಪುನಃ ಮದುವೆಯಾಗುವಂತೆ ಒತ್ತಾಯಿಸಿದ. ಆದರೆ ಯುವತಿ ನಿರಾಕರಿಸಿದ ಕೂಡಲೇ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಬಳಿಕ ಎಲ್ಲರೂ ಕಾಲುಕಿತ್ತರು ಎಂದು ಸಂತ್ರಸ್ತೆಯ ಬಂಧು ಗೀತಾ ಹೇಳಿದ್ದಾರೆ.
 
 ಗೀತಾ ನಡೆದ ವಿದ್ಯಮಾನವನ್ನು ವಿವರಿಸುತ್ತಾ, ಯುವತಿ ಹೊರಗೆ ಹೋದಲ್ಲೆಲ್ಲ ಅಭಿಷೇಕ್ ಮತ್ತಿತರ ಯುವಕರು ಅವಳಿಗೆ ಕಿರುಕುಳ ನೀಡಲಾರಂಭಿಸಿದ್ದರು. ಅಭಿಷೇಕ ಯುವತಿಗೆ ಬೆದರಿಕೆ ಹಾಕುತ್ತಾ, ಅವಳು ತನ್ನನ್ನು ಮದುವೆಯಾಗದಿದ್ದರೆ ಬೇರೊಬ್ಬರ ಸ್ವತ್ತಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದ. ಕಳೆದ ಏಳೆಂಟು ದಿನಗಳಿಂದ ಕಿರುಕುಳ ನೀಡುತ್ತಿದ್ದರಿಂದ ಸಹಿಸದ ಯುವತಿ ಸೋದರನಿಗೆ ವಿಷಯ ಮುಟ್ಟಿಸಿದ್ದರಿಂದ ಸೋದರ ಯುವತಿಯಿಂದ ದೂರಉಳಿಯುವಂತೆ ಯುವಕರಿಗೆ ಎಚ್ಚರಿಸಿದ್ದರು.

ಕೆಲವು ದಿನಗಳ ನಂತರ ಮತ್ತೆ ಕಿರುಕುಳ ಷುರುವಾಯಿತು ಎಂದು ವಿವರಿಸಿದ್ದಾಳೆ. ಯುವತಿಯ ಮೈಗೆ ಬೆಂಕಿಹಚ್ಚಿದ್ದರಿಂದ ಅವಳ ದೇಹ ಶೇ. 95ರಷ್ಟು ಸುಟ್ಟಿದ್ದು ಬದುಕುಳಿಯುವ ಆಸೆ ನಶಿಸಿದೆ ಎಂದು ಗೀತಾ ಹೇಳಿದರು.
 
 ಈಗ ಸೋದರ ಮತ್ತು ಸೋದರಿ ಇಬ್ಬರೂ ತೀವ್ರ ನೋವನ್ನು ಅನುಭವಿಸಿದ್ದಾರೆ. ಆರೋಪಿಗಳು  ಕೂಡ ಮುಂದೆಂದೂ ಇಂತಹ ಕೃತ್ಯವೆಸಗದಂತೆ  ಶಿಕ್ಷೆ ವಿಧಿಸಬೇಕು ಎಂದು ಗೀತಾ ಮನವಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಗ್ರಾಹಕರಿಗೆ ಬಂಪರ್ ಆಫರ್: ಕೇವಲ 250 ರೂ.ಗಳಿಗೆ 10 ಜಿಬಿ, 4ಜಿ ಡೇಟಾ ಸೇವೆ