Select Your Language

Notifications

webdunia
webdunia
webdunia
webdunia

'ಸರ್ಜಿಕಲ್ ಸ್ಟ್ರೈಕ್' 'ಡ್ರಾಮಾ' ಎಂದ ಸಯೀದ್

Hafiz Saeed
ಇಸ್ಲಾಮಾಬಾದ್ , ಶನಿವಾರ, 1 ಅಕ್ಟೋಬರ್ 2016 (17:02 IST)
ಜೀ ವಾಹಿನಿಗೆ ಬೆದರಿಕೆ ಹಾಕಿದ್ದ ಎಲ್ಇಟಿ ಸ್ಥಾಪಕ, ಜಮಾತ್- ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತೀಗ ಸರ್ಜಿಕಲ್ ಸ್ಟ್ರೈಕ್ ಪ್ರಧಾನಿ ಮೋದಿ ಆಡಿದ ಒಂದು ನಾಟಕ ಎಂದಿದ್ದಾನೆ. 

ಉರಿ ದಾಳಿಯಲ್ಲಿ 19 ಸೈನಿಕರು ಹತ್ಯೆಯಾದ ಬಳಿಕ ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರಧಾನಿ ಮೋದಿ ಅವರ ಮೇಲೆ ಆಂತರಿಕವಾಗಿ ವ್ಯಾಪಕ ಒತ್ತಡ ಹೇರಲಾಯ್ತು. ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು ಎಂಬ ಒತ್ತಾಯ ಕೇಳಿ ಬಂತು. ಹೀಗಾಗಿ ಅಜಿತ್ ದೋವಲ್ - ಪ್ರಧಾನಿ ಮೋದಿ 'ನಿರ್ದಿಷ್ಟ ದಾಳಿ' ನಾಟಕವನ್ನಾಡಿದರು ಎಂದು ಉಗ್ರ ಪ್ರತಿಪಾದಿಸಿದ್ದಾನೆ. 
 
ಒಳಾಂಗಣದಲ್ಲಿ ಕುಳಿತು ಧೋವಲ್ ದಾಳಿಯ ನಾಟಕವಾಡಿದರು. ಭಾರತ ಹೇಳಿಕೊಳ್ಳುವಂತಹ ಯಾವ ದಾಳಿಯೂ ನಡೆದಿಲ್ಲ ಎಂದು 26/11 ಮಾಸ್ಟರ್ ಮೈಂಡ್ ಹೇಳಿದ್ದಾನೆ.
 
ಭಾರತದ ಪ್ಯಾರಾ ಕಮಾಂಡೋಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯನ್ನು ನಿರ್ಭಿತಿಯಿಂದ ಪ್ರಸಾರ ಮಾಡಿದ್ದಕ್ಕೆ ಭಾರತದ ಅತಿ ದೊಡ್ಡ ಮಾಧ್ಯಮ ಸಂಸ್ಥೆಯಾದ 'ಜೀ' ವಾಹಿನಿಗೆ ಹಫೀಜ್ ಶುಕ್ರವಾರ ಎಚ್ಚರಿಕೆ ನೀಡಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರೋಧಿಗಳ ಎದೆ ಒಡೆಯುವ ರೀತಿಯಲ್ಲಿ ಬ್ರಿಗೇಡ್ ಸಮಾವೇಶ: ಬಿಎಸ್‌ವೈಗೆ ಪರೋಕ್ಷ ಟಾಂಗ್