Select Your Language

Notifications

webdunia
webdunia
webdunia
webdunia

ನೇತಾಜಿ ಸಾವಿನ ಕುರಿತಾದ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ

ನೇತಾಜಿ ಸಾವಿನ ಕುರಿತಾದ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸರ್ಕಾರ
ನವದೆಹಲಿ , ಬುಧವಾರ, 31 ಮೇ 2017 (12:48 IST)
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಸಾವಿನ ಕುರಿತ 70 ವರ್ಷಗಳ ಗೊಂದಲಕ್ಕೆ ಕೇಂದ್ರ ಸರ್ಕಾರ ಕೊನೆಗೂ ತೆರೆ ಎಳೆದಿದೆ. ಆರ್`ಟಿಐ ಅರ್ಜಿಯೊಂದಕ್ಕೆ ಉತ್ತರಿಸಿರುವ ಗೃಹ ಇಲಾಖೆ  1945ರ ಆಗಸ್ಟ್ 18ರಂದು ತೈವಾನ್`ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದೆ.
 

ಶಹನವಾಜ್ ಸಮಿತಿ, ಜೆಸ್ಟೀಸ್ ಜಿ.ಡಿ. ಖೋಸ್ಲಾ ಕಮೀಶನ್ ಮತ್ತು ಜಸ್ಟೀಸ್ ಮುಖರ್ಜಿ ಕಮೀಷನ್ ಸಲ್ಲಿಸಿದ್ದ ತನಿಖಾ ವರದಿಯನ್ನ ಆಧರಿಸಿ ಕೇಂದ್ರ ಗೃಹ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ. ನೇತಾಜಿ ಸಾವಿನ ಕುರಿತಾದ ಮಾಹಿತಿ ಸಯಕ್ ಸೇನ್ ಎಂಬುವರು ಆರ್`ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಸುಭಾಸ ಚಂದ್ರ ಬೋಸ್ 1985ರವರೆಗೂ ಬದುಕಿದ್ದರು, ಗುಮ್ನಾಮಿ ಬಾಬಾ ಹೆಸರಲ್ಲಿ ಉತ್ತರಪ್ರದೇಶದ ಅಜ್ಞಾತ ಸ್ಥಳದಲ್ಲಿ ವಾಸವಿದ್ದರು ಎಂಬ ಬಗ್ಗೆಯೂ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಇಲಾಖೆ, ಗುಮ್ನಾಮಿ ಬಾಬಾ ಕುರಿತ ಕೆಲ ಮಾಹಿತಿಗಳು ಮುಖರ್ಜಜಿ ಕಮೀಶನ್ ವರದಿಯ 114-122 ಪುಟಗಳಲ್ಲಿ ಲಭ್ಯವಿದೆ. ಗೃಹ ಿಲಾಖೆಯ ವೆಬ್ ಸೈಟ್`ನಲ್ಲಿ ವರದಿ ಲಭ್ಯವಿದೆ ಎಂದು ಹೇಳಿದೆ. ಗುಮ್ನಾಮಿ ಬಾಬಾ ಸುಭಾಶ ಚಂದ್ರ ಬೋಸ್ ಅಲ್ಲ. ಮುಖರ್ಜಿ ಕಮೀಶನ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ವೇಳೆ ಸಂಭವಿಸಿದ ಅಪಘಾತ: ಶಾರುಖ್‌ ಖಾನ್‌ ಜಸ್ಟ್ ಎಸ್ಕೇಪ್