Select Your Language

Notifications

webdunia
webdunia
webdunia
webdunia

'ಕೈ' ಬಿಟ್ಟು ಕಮಲದ ತೆಕ್ಕೆಗೆ ಸೇರುತ್ತಾರಾ ಹಿರಿಯ ನಾಯಕಿ ರೀಟಾ ಬಹುಗುಣ?

Uttar Pradesh chief
ಲಕ್ನೋ , ಸೋಮವಾರ, 17 ಅಕ್ಟೋಬರ್ 2016 (16:16 IST)
ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಉತ್ತರಪ್ರದೇಶ್ ಕಾಂಗ್ರೆಸ್ ಮಾಜಿ ನಾಯಕಿ ರಿಟಾ ಬಹುಗುಣ ಜೋಶಿ ಬಿಜೆಪಿ ಸೇರುವ ಸಾಧ್ಯತೆಗಳಿದ್ದು, ಹಾಗಾಗಿದ್ದೇ ಆದರೆ ಕೈಗೆ ಬಹುದೊಡ್ಡ ಹೊಡೆತ ನೀಡಿದಂತಾಗಲಿದೆ. 

ಕಾಂಗ್ರೆಸ್ ಹೀನಾಯ ಸೋಲು ಕಂಡ 2012ರ ವಿಧಾನಸಭಾ ಚುನಾವಣೆಯಲ್ಲಿ ಜೋಶಿ ಪಕ್ಷದ ಭಾಗವಾಗಿದ್ದರು. ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಅವರು ಕಾಂಗ್ರೆಸ್ ವಕ್ತಾರರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಆಗಾಗ ಸುದ್ದಿ ವಾಹಿನಿಗಳಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧದ ಕಟುವಾಗಿ ಹರಿಹಾಯುವುದಕ್ಕೆ ಗುರುತಿಸಿಕೊಂಡಿದ್ದರು. 
 
ಜೋಶಿ ಬಿಜೆಪಿ ಸೇರುವುದನ್ನು ಬಿಜೆಪಿಯಾಗಲಿ, ಜೋಶಿ ಪರಿವಾರದವರಾಗಲಿ ಖಚಿತ ಪಡಿಸಿಲ್ಲ. ಈ ಸುದ್ದಿಯನ್ನು ಅಲ್ಲಗಳೆದಿರುವ ಅವರ ಸಹೋದರ ವಿಜಯ್ ಬಹುಗುಣ, ಜೋಶಿ ಕಮಲಕ್ಕೆ ಸೇರುವುದು ಕೇವಲ ವದಂತಿ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಳಸಂತೆಯಲ್ಲಿ 500 ರೂ.ಗಳಿಗೆ ರಿಲಯನ್ಸ್ ಜಿಯೋ ಸಿಮ್ ಕಾರ್ಡ್ ಮಾರಾಟ