Select Your Language

Notifications

webdunia
webdunia
webdunia
webdunia

ಆಹಾರ ನಮ್ಮ ಆಯ್ಕೆ, ನಾನೊಬ್ಬ ಮಾಂಸಾಹಾರಿ: ಸಚಿವ ವೆಂಕಯ್ಯ ನಾಯ್ಡು

ಆಹಾರ ನಮ್ಮ ಆಯ್ಕೆ, ನಾನೊಬ್ಬ ಮಾಂಸಾಹಾರಿ: ಸಚಿವ ವೆಂಕಯ್ಯ ನಾಯ್ಡು
NewDelhi , ಬುಧವಾರ, 7 ಜೂನ್ 2017 (08:55 IST)
ನವದೆಹಲಿ: ನಾವು ತಿನ್ನುವ ಆಹಾರ ನಮ್ಮ ಆಯ್ಕೆ. ಯಾರೂ ಅದನ್ನು ಪ್ರಶ್ನಿಸುತ್ತಿಲ್ಲ. ಸ್ವತಃ ನಾನೇ ಒಬ್ಬ ಮಾಂಸಾಹಾರಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

 
ನಾನೂ ಒಬ್ಬ ಮಾಂಸಾಹಾರಿ. ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧ ಮಾಡುವ ಮೂಲಕ ಎಲ್ಲರನ್ನೂ ಸಸ್ಯಾಹಾರಿಗಳಾಗಿ ಮಾಡಲು ಯತ್ನಿಸುತ್ತಿದೆ. ನಮ್ಮ ಆಹಾರ ಕ್ರಮವನ್ನೇ ಪ್ರಶ್ನಿಸುತ್ತಿದೆ ಎಂಬುದೆಲ್ಲಾ ಸುಳ್ಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗೋ ಹತ್ಯೆ ನಿಷೇಧ ಕುರಿತಂತೆ ವಿಪಕ್ಷಗಳು ಮಾಡುವ ಆರೋಪಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕೆಲವು ಹುಚ್ಚರು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಆಹಾರ ನಮ್ಮ ಆಯ್ಕೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಜೆಪಿ ಎಲ್ಲರನ್ನೂ ಸಸ್ಯಾಹಾರಿಯಾಗಿ ಮಾಡಲು ಯತ್ನಿಸುತ್ತಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದವು. ಆದರೆ ನಾನೊಬ್ಬ ಮಾಂಸಾಹಾರಿ. ಹಾಗಿದ್ದೂ ಬಿಜೆಪಿಯ ಅಧ್ಯಕ್ಷನಾಗಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪದತ್ಯಾಗ ಸಾಧ್ಯತೆ