ಫುಡ್ ಡೆಲಿವರಿ ಬಾಯ್ ಕಷ್ಟಕ್ಕೆ ಸ್ಪಂಧಿಸಿದ ಪೊಲೀಸರು!

Webdunia
ಮಂಗಳವಾರ, 3 ಮೇ 2022 (08:49 IST)
ಇಂದೋರ್ : ರಾತ್ರಿ ಪಾಳಿಯಲ್ಲಿ ಫುಡ್ ಡೆಲಿವರಿ ಬಾಯ್, ಸೈಕಲ್ ತುಳಿದು ಆಹಾರ ವಿತರಣೆ.
 
ಈತನ ಪಾಡು ಕಂಡ ಪೊಲೀಸರು ಹೊಚ್ಚ ಹೊಸ ಬೈಕ್ ಉಡುಗೊರೆ ನೀಡಿ ಯವಕನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮಧ್ಯಪ್ರದೇಶದ ಪೊಲೀಸರು ರಾತ್ರಿ ಪಾಳಿಯಲ್ಲಿದ್ದಾಗ 22ರ ಹರೆಯದ ಯುವಕ ಜಯ್ ಹಲ್ದೆ ಸೈಕಲ್ ತುಳಿಯುತ್ತಾ ಸಂಪೂರ್ಣ ಒದ್ದೆಯಾಗಿದ್ದ.

ಬೆವರಿನಿಂದ ಒದ್ದೆಯಾದ ಯುವಕನ ನಿಲ್ಲಿಸಿದ ಪೊಲೀಸರು ಆತನ ಬಳಿ ಮಾಹಿತಿ ಕೇಳಿದ್ದಾರೆ. ಈ ವೇಳೆ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬೈಕ್ ಖರೀದಿಸುವ ಶಕ್ತಿ ತನಗಿಲ್ಲ. ಹೀಗಾಗಿ ಸೈಕಲ್ ಮೂಲಕ ಫುಡ್ ಡೆಲಿವರಿ ಮಾಡುತ್ತಿರುವುದಾಗಿ ಜಯ್ ಹಲ್ದೆ ಹೇಳಿದ್ದಾನೆ.

ಈತನ ಕುಟುಂಬದ ಕತೆ, ಆತನ ಪರಿಸ್ಥಿತಿ ನೋಡಿದ ಮಧ್ಯಪ್ರದೇಶ ಪೊಲೀಸರು ಯುವಕನಿಗೆ ನೆರವು ನೀಡಲು ಮುಂದಾಗಿದ್ದಾರೆ. ಮರುದಿನ ಠಾಣೆಯಲ್ಲಿ ಈ ಕುರಿತು ಇತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎಲ್ಲರೂ ಹಣ ಒಗ್ಗೂಡಿಸಿದ್ದಾರೆ. ಬಳಿಕ ಡೌನ್ಪೇಮೆಂಟ್ ಮಾಡಿ ಬೈಕ್ ಖರೀದಿಸಿ, ಜಯ್ ಹಲ್ಡೆಗೆ ಉಡುಗೊರೆಯಾಗಿ ನೀಡಿದ್ದಾರೆ.

ಬೈಕ್ನ ಲೋನ್ ಮೂಲಕ ಖರೀದಿಸಾಗಿದೆ. ಉಳಿದ ಕಂತಿನ ಹಣವನ್ನೂ ಪೋಲೀಸರೆ ಭರಿಸಲಿದ್ದಾರೆ. ಈ ಬೈಕ್ ಸಂಪೂರ್ಣವಾಗಿ ಉಚಿತ. ಸೈಕಲ್ ಮೂಲಕ ಫುಡ್ ಡೆಲಿವರಿ ಅತ್ಯಂತ ಕಷ್ಟ. ಇಷ್ಟೇ ಅಲ್ಲ ಆದಾಯ ಕೂಡ ಕಡಿಮೆ. ಇದರಿಂದ ಬೈಕ್ನಲ್ಲಿ ಫುುಡ್ ಡೆಲಿವರಿ ಸೇರಿದಂತೆ ಇತರ ಕೆಲಸಗಳಿಗೆ ಯುವಕನಿಗೆ ನೆರವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ: ಪ್ರಮೋದ್ ಮುತಾಲಿಕ್

ರೋಡ್‌ನಲ್ಲಿ ಬಿಟ್ಟು ಹೋದ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿ, ಆಗಿದ್ದೇನು ಗೊತ್ತಾ

ಶಬರಿಮಲೆ ಚಿನ್ನ ಕಳವು ವಿಚಾರ, ಈಗ ಮಾತನಾಡುವುದು ಸರಿಯಲ್ಲ: ಪಿಣರಾಯಿ ವಿಜಯನ್

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಚಾರ ವದಂತಿ ಬೇಡ: ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments