Webdunia - Bharat's app for daily news and videos

Install App

ಎಸ್ಐ ಆಗಿ ಅಧಿಕಾರ ಸ್ವೀಕರಿಸಿದ ಭಾರತದ ಮೊದಲ ಮಂಗಳಮುಖಿ ಪ್ರೀತಿಕಾ

Webdunia
ಮಂಗಳವಾರ, 10 ಅಕ್ಟೋಬರ್ 2017 (19:26 IST)
ಚೆನ್ನೈ: ಭಾರತದ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ ಕೆ. ಪ್ರೀತಿಕಾ ಯಾಶಿನಿ, ಇಂದು ಚೂಲೈಮೇಡು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಂಡಿದ್ದಾರೆ.

ಪ್ರೀತಿಕಾ ವಿಶೇಷವಾಗಿ ಮಂಗಳಮುಖಿಯರನ್ನ ನಿಭಾಯಿಸುವಲ್ಲಿ ತುಂಬಾ ಸಹಾಯಕರಾಗಿದ್ದಾರೆ. ಚೂಲೈಮೇಡು ಪೊಲೀಸ್ ಠಾಣೆಯಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಮತ್ತು ನಮ್ಮಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಠಾಣೆ ಇನ್ಸ್ ಪೆಕ್ಟರ್ ಜೆ.ಶಿವಕುಮಾರ್ ಹೇಳಿದ್ದಾರೆ.

ಪ್ರೀತಿಕಾ ಪೊಲೀಸ್ ಸರ್ವೀಸ್ ಗೆ ಸೇರುವುದಕ್ಕೂ ಮೊದಲು ಅನೇಕ ಸಮಸ್ಯೆಗಳನ್ನ ಫೇಸ್ ಮಾಡಿದ್ದರು. ಮಂಗಳಮುಖಿಯಾಗಿದ್ದರಿಂದ ಅವರ ಅಪ್ಲಿಕೇಷನ್ ರಿಜಕ್ಟ್ ಆಗಿತ್ತು. ಬಳಿಕ ಆಕೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಇದಾದ ಬಳಿಕ ತಮಿಳುನಾಡು ಏಕರೂಪ ಸೇವೆಗಳ ನೇಮಕಾತಿ ಸಮಿತಿ ಪ್ರೀತಿಕಾ ಅರ್ಜಿಯನ್ನು ಸ್ವೀಕರಿಸಿತ್ತು. ಆಯ್ಕೆಯೂ ಆಗಿದ್ದ ಪ್ರೀತಿಕಾ, ಕಳೆದ ವರ್ಷ ವಂದಲೂರಿನಲ್ಲಿರುವ ತಮಿಳುನಾಡು ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. 111 ಮಂದಿ ಇದ್ದ ಬ್ಯಾಚ್ ನಲ್ಲಿ ಪ್ರೀತಿಕಾ ಕೂಡ ಸಬ್ ಇನ್ಸ್ ಪೆಕ್ಟರ್ ಆಗಿ ಸೆಲೆಕ್ಟ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments