Webdunia - Bharat's app for daily news and videos

Install App

ಅಹ್ಮದ್ ಪಟೇಲ್ ಮೇಲಿನ ಅಮಿತ್ ಶಾ ಸೇಡಿಗೆ ಬಲಿಯಾದರಾ ಡಿಕೆಶಿ..?

Webdunia
ಗುರುವಾರ, 3 ಆಗಸ್ಟ್ 2017 (09:50 IST)
ನಿನ್ನೆಯಿಂದ ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ನಡೆದ ಐಟಿ ದಾಳಿ ದೇಶಾದ್ಯಂತ ಹಲವು ವಿಶ್ನೇಷಣೆಗಳಿಗೆ ಎಡೆಮಾಡಿಕೊಟ್ಟಿದೆ. ಆಡಳಿತಾರೂಡ ಬಿಜೆಪಿ ಮತ್ತು ಅಹ್ಮದ್ ಪಟೇಲ್ ನಡುವಿನ ಸೇಡಿನ ರಾಜಕಾರಣಕ್ಕೆ ಡಿ.ಕೆ. ಶಿವಕುಮಾರ್ ಬಲಿಯಾದರಾ ಎಂಬ ಅನುಮಾನಗಳೂ ಕಾಡುತ್ತಿವೆ.

2010ರಲ್ಲಿ ಸೊಹ್ರಾಬುದ್ದೀನ್ ಎನ್`ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನ ಸಿಬಿಐ ಬಂಧಿಸಿ ಜೈಲಿಗೆ ಹಾಕಿತ್ತು. 2014ರಲ್ಲಿ ಅಮಿತ್ ಶಾ ಖುಲಾಸೆಯಾಗಿದ್ದರು. ಕೋರ್ಟ ಅವರನ್ನ ಆರೋಪಮುಕ್ತಗೊಳಿಸಿತ್ತು.  ಆದರೆ, ತನ್ನ ವಿರುದ್ಧ ಅಂದಿನ ಆಡಳಿತಾರೂಡ ಯುಪಿಎ ಸರ್ಕಾರ ತಂತ್ರ ರೂಪಿಸಿತ್ತು ಎಂಬುದು ಅಮಿತ್ಯಸಭಾ ಚ ಶಾ ಆರೋಪ. ಅದರಲ್ಲೂ ನರೇಂದ್ರಮೋದಿಗೆ ಆಪ್ತರಾಗಿದ್ದ ಅಮಿತ್ ಶಾ ಅವರನ್ನ ಹಣಿಯಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಈ ತಂತ್ರ ರೂಪಿಸಿದ್ದರು ಎಂಬ ಬಲವಾದ ಻ನುಮಾನ ಻ಮಿತ್ ಶಾಗೆ ಕಾಡಿತ್ತು.

ಅಹ್ಮದ್ ಪಟೇಲ್ ಮೇಲಿನ ಸೇಡು ತೀರಿಸಿಕೊಳ್ಳಲೆಂದೇ ರಾಜ್ಯಸಭಾ ಚುನಾವಣೆಯಲ್ಲಿ ಸೋಲುಣಿಸಿ ಬಿಸಿ ಮುಟ್ಟಿಸಲು ಅಮಿತ್ ಶಾ ಗುಜರಾತ್`ನಲ್ಲಿ ತಂತ್ರ ರೂಪಿಸಿದ್ದರು. ಕಾಂಗ್ರೆಸ್ ಶಾಸಕರ ಮೇಲೂ ಒತ್ತಡ ಹೇರಿದ್ದ ಆರೋಪಗಳೂ ಕೇಳಿ ಬರುತ್ತಿವೆ. 15 ಕೋಟಿ ರೂ. ಆಮಿಷವೊಡ್ಡಿದ್ದ ಬಗ್ಗೆ ಶಾಸಕರ ಬಹಿರಂಗಪಡಿಸಿದ್ದಾರೆ.ಆದರೆ, ಅಮಿತ್ ಶಾ ಅವರ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ ಮಾಡಿತ್ತು. ಗುಜರಾತ್`ನ ಕಾಂಗ್ರೆಸ್ ಶಾಸಕರನ್ನ ಕರ್ನಾಟಕ್ಕೆ ರೆಸಾರ್ಟ್`ನಲ್ಲಿ ಭದ್ರತೆ ನೀಡಲಾಗಿತ್ತು. ಇದರ ನೇತ್ಋತ್ವ ವಹಿಸಿದ್ದವರು ಸಚಿವ ಡಿ.ಕೆ. ಶಿವಕುಮಾರ್. ಇದರಿಂದ ಬಿಜೆಪಿಯ ಗೆಲುವಿನ ತಂತ್ರಕ್ಕೆ ಭಾರೀ ಹಿನ್ನಡೆಯಾಗಿತ್ತು. ಇದರ ಫಲಪ್ರದವೇ ಐಟಿ ರೇಡ್ ಎಂದು ವಿಶ್ಲೇಷಿಸಲಾಗುತ್ತಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments