Webdunia - Bharat's app for daily news and videos

Install App

ಭಾರತ ಕಿರಿಕ್ ಮಾಡ್ತಿದೆ ಎಂದ ಚೀನಾ

Webdunia
ಗುರುವಾರ, 3 ಆಗಸ್ಟ್ 2017 (09:43 IST)
ನವದೆಹಲಿ: ಡೋಕ್ಲಾಂ ಗಡಿ ವಿಚಾರದಲ್ಲಿ ಮತ್ತೆ ಚೀನಾ ಭಾರತಕ್ಕೆ ಬೆದರಿಕೆ ಹಾಕುವ ಯತ್ನ ನಡೆಸಿದೆ. ಗಡಿಯಲ್ಲಿ ನಾವು ತಾಳ್ಮೆಯಿಂದಿದ್ದರೂ, ಭಾರತವೇ ಅನಾವಶ್ಯಕವಾಗಿ ಕಿರಿಕ್ ಮಾಡ್ತಿದೆ ಎಂದು ಆರೋಪಿಸಿದೆ.


ಮತ್ತೊಮ್ಮೆ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಎಚ್ಚರಿಸಿರುವ ಚೀನಾ, ಭಾರತ ಕಿರಿಕ್ ಮಾಡುವ ಬದಲು ತಪ್ಪು ತಿದ್ದಿಕೊಳ್ಳಬೇಕು. ನಮ್ಮ ಗಡಿಯೊಳಗೆ ಪ್ರವೇಶಿಸಿ ನಮ್ಮ ಸಾರ್ವಭೌಮತೆಗೆ ಭಾರತ ಧಕ್ಕೆ ತಂದಿದೆ ಎಂದು ಆರೋಪಿಸಿದೆ.

ಆದರೆ ಚೀನಾ ಬೆದರಿಕೆಗೆ ಜಗ್ಗದ ಭಾರತ, ಯಾವುದೇ ಕಾರಣಕ್ಕೂ ಸೇನೆ ಹಿಂಪಡೆಯುವುದಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದೆ. ಡೋಕ್ಲಾಂಗೆ ರಸ್ತೆ ನಿರ್ಮಿಸಿ ಚೀನಾ ಯಥಾಸ್ಥಿತಿ ಒಪ್ಪಂದ ಮುರಿದಿದೆ. ಚೀನಾ ಈ ಭಾಗದಲ್ಲಿ ಸೇನೆ ನಿಯೋಜನೆ ಮಾಡಿರುವುದಕ್ಕೆ ಪ್ರತಿಯಾಗಿ ನಾವೂ ಸೇನೆ ನಿಯೋಜಿಸಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ..  ಬಂಧನವಾಗ್ತಾರಾ ಡಿಕೆ ಶಿವಕುಮಾರ್?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments