Webdunia - Bharat's app for daily news and videos

Install App

ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಿಸಿದರಾ..?

Webdunia
ಸೋಮವಾರ, 8 ಮೇ 2017 (19:24 IST)
ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಲು ಹೇಳಿ ಪರೀಕ್ಷಾಧಿಕಾರಿಗಳು ಅಪಮಾನ ಎಸಗಿರುವ ಘಟನೆ ಕೇರಳದ ಕಣ್ಣೂರಿನಿಂದ ವರದಿಯಾಗಿದೆ.

ಕಾಸರಗೋಡು ಮೂಲದ ವಿದ್ಯಾರ್ಥಿನಿ ಕಣ್ಣೂರಿನ ಟಿಸ್ಕ್ ಇಂಗ್ಲೀಷ್ ಸ್ಕೂಲ್`ನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಲೋಹ ಹುಕ್ಕುಗಳಿದ್ದ ಹಿನ್ನೆಲೆಯಲ್ಲಿ ಮೆಟಲ್ ಡಿಟೆಕ್ಟರ್`ನಲ್ಲಿ ಬೀಫ್ ಸೌಂಡ್, ಬಂದ ಹಿನ್ನೆಲೆಯಲ್ಲಿ ಮಹಿಳೆಯ ಕಂಚುಕವನ್ನ ತೆಗೆಯಲು ಸೂಚಿಸಿದ್ದಾರೆ.
`ಅವರು ನನ್ನ ಒಳ ಉಡುಪು ತೆಗೆಯಲು ಸೂಚಿಸಿದರು. ಅದಾಗಲೇ 9.20ರ ಸಮಯವಾಗಿತ್ತು. ಪರೀಕ್ಷೆ ಆರಂಭವಾಗಲು 10 ನಿಮಿಷ ಮಾತ್ರವೇ  ಉಳಿದಿತ್ತು. ಒಳ ಉಡುಪು ತೆಗೆಯಲು ಶೌಚಾಲಯ ಬಳಸಲು ಕೇಳಿದೆ. ಅವಕಾಶ ಕೊಡಲಿಲ್ಲ. ಅದೃಷ್ಟವಶಾತ್ ಮಹಿಳೆ ಇನ್ವಿಜಿಲೇಟರ್ ಅಲ್ಲಿದ್ದರು. ಅಲ್ಲೇ ನನ್ನ ಒಳ ಉಡುಪು ಬಿಚ್ಚಿದೆ ಎಂದು ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾರೆ.

ಆ ಘಟನೆ ಒಂದು ವರ್ಷದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದ ನನ್ನ ಆತ್ಮಸ್ಥೈರ್ಯವನ್ನೇ ಕುಂದಿಸಿಬಿಟ್ಟಿತು ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಹಲವು ವಿದ್ಯಾರ್ಥಿನಿಯರಿಗೂ ಇದೇ ಪರಿಸ್ಥಿತಿಯಾಗಿರುವ ಬಗ್ಗೆ ವರದಿಯಾಗಿದೆ. ನೀಟ್ ನಿಯಮಾವಳಿಯಲ್ಲಿ ಈ ರೀತಿಯ ಅಂಶಗಳಿವೆ ಎಂಬ ಪ್ರಶ್ನೆ ಎದ್ದಿದೆ. ಇಲ್ಲವೇ ಅಧಿಕಾರಿಗಳೇ ದುರುಪಯೋಗ ಮಾಡಿಕೊಂಡರೆ ಎಂಬ ಪ್ರಶ್ನೆಗೆ ತನಿಖೆಗೆ ಬಳಿಕವೇ ಉತ್ತರ ಸಿಗಲಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಗಂದೂರು ಸೇತುವೆ ಉದ್ಘಾಟನೆಗೆ ಆಹ್ವಾನ ಸಿಕ್ಕಿಲ್ಲ ಎಂದ ಸಿಎಂ ಸಿದ್ದರಾಮಯ್ಯ ನೆಟ್ಟಿಗರ ಪ್ರಶ್ನೆ

ಸಿಎಂ ಕುರ್ಚಿ ವಿಚಾರ ಬಿಜೆಪಿಗೆ ಸಂಬಂಧಿಸಿದ್ದಲ್ಲ: ಸಂತೋಷ ಲಾಡ್‌

ಶರಾವತಿ ಮುಕುಟದ ಮಲೆನಾಡ ಸೊಬಗಿನ ಐತಿಹಾಸಿಕ ಸಿಗಂಧೂರ ಸಿಂಧೂರ ರಾಷ್ಟ್ರಕ್ಕೆ ಅರ್ಪಣೆ

ದೇಶದ ಅತಿ ಉದ್ದದ ಸಿಗಂದೂರು ಸೇತುವೆ ಲೋಕಾರ್ಪಣೆ, ಶಿಷ್ಟಾಚಾರ ಉಲ್ಲಂಘನೆ ಎಂದ ಸಿಎಂಗೆ ಗಡ್ಕರಿ ಪ್ರತಿಕ್ರಿಯೆ

ತಂದೆಯಿಂದಲೇ ಹತ್ಯೆಯಾದ ಟೆನ್ನಿಸ್ ತಾರೆ ರಾಧಿಕಾ, ಇದೊಂದು ಮುಚ್ಚಿದ ಪ್ರಕರಣ ಎಂದಿದ್ಯಾಕೆ ಖಾಕಿ

ಮುಂದಿನ ಸುದ್ದಿ
Show comments