Webdunia - Bharat's app for daily news and videos

Install App

ಲೈಂಗಿಕ ಕ್ರಿಯೆ ನಿರಾಕರಿಸಿದ ಮಗಳನ್ನು ತಂದೆಯೇ ಕತ್ತರಿಸಿ ಹಾಕಿದ

Webdunia
ಸೋಮವಾರ, 30 ಅಕ್ಟೋಬರ್ 2023 (08:09 IST)
ಕೃಷಿಕಾರ್ಮಿಕನಾಗಿರುವ ರಕ್ತು ಪ್ರಸಾದ್ ಎಂಬ ಪಾಪಿ ತಂದೆಯೇ ಈ ದುಷ್ಕೃತ್ಯವನ್ನೆಸಗಿದ್ದು ,  ಮೃತಳ ಗಂಡ ನೀಡಿದ ದೂರಿನ ಆಧಾರದ ಮೇಲೆ ಮೀನಾಪುರ ಠಾಣೆಯ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ತನ್ನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ ವಿವಾಹಿತ ಮಗಳನ್ನು ಹುಲ್ಲು ಕತ್ತರಿಸುವ ಕಟ್ಟರ್‌ನಿಂದ ಸ್ವಂತ ತಂದೆಯೇ ಕತ್ತರಿಸಿ ಹಾಕಿದ ಘಟನೆ ಮುಜಪ್ಪರ್‌ನಗರದ  ಮುಸ್ತಫಾಗಂಜ್ ಎಂಬ ಹಳ್ಳಿಯಲ್ಲಿ ನಡೆದಿದೆ. 
 
ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಎರಡು ವರ್ಷಗಳ ಹಿಂದಾದ ತನ್ನ ಪತ್ನಿಯ ಸಾವು ಕೂಡ ಆತ್ಮಹತ್ಯೆಯಲ್ಲ ತಾನೇ ಕೊಂದಿದ್ದು ಎಂದು ಸಹ ಒಪ್ಪಿಕೊಂಡಿದ್ದಾನೆ. ಆರೋಪಿಯ ಮಗಳು ಕಳೆದ ನಾಲ್ಕು ತಿಂಗಳ ಹಿಂದೆ ಪಕ್ಕದೂರಿನ ಒಂದು ಸಣ್ಣ ಅಂಗಡಿ ಮಾಲೀಕನನ್ನು ಮದುವೆಯಾಗಿದ್ದಳು. 
 
ಎರಡು ದಿನಗಳ ಹಿಂದೆ ಆಕೆ ಗಂಡನ ಜತೆ ತವರಿಗೆ ಬಂದಿದ್ದಳು. ಬುಧವಾರ ರಾತ್ರಿ ಕುಡಿದು ಮನೆಗೆ ಬಂದ ರಕ್ತು ತನ್ನ ಅಳಿಯ ಮಗಳು ನಿದ್ರಿಸುತ್ತಿದ್ದ ಕೋಣೆಗೆ ಬಂದು ಅಳಿಯನ ಬಳಿ ಜಗಳವಾಡತೊಡಗಿದ. ತಕ್ಷಣ ಮನೆಯಿಂದ ಆಚೆ ಹೋಗದಿದ್ದರೆ ಕೊಲ್ಲುವುದಾಗಿ ಆತ ಅಳಿಯನಿಗೆ ಬೆದರಿಕೆ ಹಾಕಿದ. 

ಆತ ಮನೆಯಿಂದ ಆಚೆ ಹೋದ ಮೇಲೆ ಮಗಳ ಮೇಲೆರಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ. ಆತನಿಗೆ ಪ್ರತಿರೋಧ ತೋರಿದ ಆಕೆ ಸಹಾಯಕ್ಕಾಗಿ ಕೂಗಿಕೊಂಡಳು. ಇದರಿಂದ ಸಿಟ್ಟಿಗೆದ್ದ ಆತ ಅಲ್ಲೇ ಇದ್ದ ಮೇವು ಕತ್ತರಿಸುವ ಸಾಧನದಿಂದ ಆಕೆಯ ಕುತ್ತಿಗೆ, ಕೈ, ಹೊಟ್ಟೆ, ಕಾಲುಗಳಿಗೆ ಮಾರಕವಾಗಿ ದಾಳಿ ನಡೆಸಿ ಕೊಂದು ಹಾಕಿದ. ಆಕೆಯ ಮೇಮೇಲೆ 15 ರಿಂದ 20 ಗಾಯದ ಗುರುತುಗಳಿವೆ. 
 
ಆರೋಪಿಯ ರಕ್ತುವಿನ 5 ಜನ ಮಕ್ಕಳಲ್ಲಿ ಇವಳೇ ದೊಡ್ಡವಳಾಗಿದ್ದಳು. ಘಟನೆ ನಡೆದ ಸಮಯದಲ್ಲಿ ನಾಲ್ಕು ಜನ ಅಪ್ರಾಪ್ತ ಮಕ್ಕಳು ಇನ್ನೊಂದು ಕೋಣೆಯಲ್ಲಿ ನಿದ್ರಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ