Select Your Language

Notifications

webdunia
webdunia
webdunia
webdunia

ಒಂದೇ ಕುಟುಂಬದ 6 ಮಂದಿಯಿಂದ ದಯಾಮರಣಕ್ಕೆ ಅರ್ಜಿ

ಒಂದೇ ಕುಟುಂಬದ 6 ಮಂದಿಯಿಂದ ದಯಾಮರಣಕ್ಕೆ ಅರ್ಜಿ
ಬದಾಮಿ , ಬುಧವಾರ, 16 ನವೆಂಬರ್ 2016 (10:53 IST)
ಒಂದೇ ಕುಟುಂಬದ 6 ಮಂದಿ ರಾಜ್ಯಪಾಲರಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಪ್ರಸಂಗ ಬಾಗಲಕೋಟೆ ಬದಾಮಿ ತಾಲ್ಲೂಕಿನಲ್ಲಿ ನಡೆದಿದೆ. 
ಬಾಗಲಕೋಟೆ ಬದಾಮಿ ನಗರದ ವಾರ್ಡ್ ನಂಬರ್ 5 ರ ನಿವಾಸಿ ಬಸಪ್ಪ ತಳವಾರ ಕುಟುಂಬ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದವರಾಗಿದ್ದಾರೆ. 
 
ತಳವಾರ ಮನೆ ಪಕ್ಕದಲ್ಲಿ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಶೋಭಾ ಬಾಲಗೌಡರ್ ಅವರು ನಿಯಮ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ತಡೆಯುವಂತೆ ಪುರಸಭೆಗೆ ತಳವಾರ್ ಕುಟುಂಬ ಮನವಿ ಮಾಡಿತ್ತು.
 
ಕಳೆದ ಒಂದೂವರೆ ವರ್ಷದಿಂದ ಮನವಿ ಮಾಡುತ್ತಿದ್ದರೂ ಪುರಸಭೆ ಸ್ಪಂದಿಸುತ್ತಿಲ್ಲ. ಹೀಗಾಗಿ ಮನನೊಂದು ಸಾವಿಗೆ ಶರಣಾಗ ಬಯಸಿದ್ದೇವೆ. ದಯಾಮರಣಕ್ಕೆ ಅನುಮತಿ ನೀಡಿ ಎಂದು ಕುಟುಂಬ ರಾಜ್ಯಪಾಲರಿಗೆ ಅರ್ಜಿ ರವಾನಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವೆ ಸುಷ್ಮಾ ಸ್ವರಾಜ್‌ಗೆ ಕಿಡ್ನಿ ವೈಫಲ್ಯ