Select Your Language

Notifications

webdunia
webdunia
webdunia
webdunia

ಸೈಕಲ್ ಪಂಕ್ಚರ್ ಆಗಿದೆ, ಆನೆ ದುಡ್ಡನ್ನು ನುಂಗಿದೆ: ರಾಹುಲ್ ಗಾಂಧಿ

Elephant
ಅಜಂಗಡ , ಸೋಮವಾರ, 12 ಸೆಪ್ಟಂಬರ್ 2016 (16:05 IST)
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಡಳಿತಾರೂಢ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ. ಆನೆ (ಬಿಎಸ್‌ಪಿ ಚುನಾವಣಾ ಚಿಹ್ನೆ) ಎಲ್ಲ ಹಣವನ್ನು ತಿಂದುಹಾಕಿದರೆ, ಸೈಕಲ್ (ಸಮಾಜವಾದಿ ಚುನಾವಣಾ ಚಿಹ್ನೆ) ಪಂಕ್ಚರ್ ಆಗಿ ನಿಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. 
 
ಹಾಥಿ ಸಾರಾ ಪೈಸಾ ಖಾಗಯಾ( ಆನೆ ಹಣವನ್ನೆಲ್ಲ ತಿಂದು ಹಾಕಿತು), ಹಾಥಿ ಕೊ ಅಪ್ನೆ ಮಾರ್ ಕೆ ಭಗಾ ದಿಯಾ (ಅದನ್ನು ನೀವು ಹೊಡೆದೋಡಿಸಿದಿರಿ. ಪಿರ್ ಆಪ್ ಸೈಕಲ್ ಲಾಯೇ (ಬಳಿಕ ನೀವು ಸೈಕಲ್ ತಂದಿರಿ),ಯೆ ಪಾಂಚ್ ಸಾಲ್ ಸೆ ಪಂಸಿ ಹುಯಿ ಹೈ, ಹಿಲ್ ನಹಿ ರಹೀ ಹೈ ( ಸೈಕಲ್ ಕಳೆದ ಐದು ವರ್ಷಗಳಿಂದ ಸಿಕ್ಕಿ ಹಾಕಿಕೊಂಡಿದೆ, ಅಲ್ಲಾಡುತ್ತಲೂ ಇಲ್ಲ) ಉಸ್ಕಾ ಟೈರ್ ಪಂಕ್ಚರ್ ಹೈ, ಔರ್ ಆಪ್ಕೋ ರೇಷನ್ ಕಾರ್ಡ್ ನಹೀಂ ದಿಲಾ ಪಾ ರಹೀ ಹೈ( ಅದರ ಚಕ್ರ ಪಂಕ್ಚರ್ ಆಗಿದೆ, ಹೀಗಾಗಿ ನಿಮಗೆ ಪಡಿತರ ಚೀಟಿಯನ್ನು ಕೊಡಿಸಲು ಅದರಿಂದಾಗುತ್ತಿಲ್ಲ) ಎಂದು ಯುಪಿಯಲ್ಲಿ ಕಿಸಾನ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಅಣಕವಾಡಿದ್ದಾರೆ. 
 
'ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳೆರಡು ನಿಮಗೆ ವಂಚನೆ ಮಾಡಿದ್ದು, ನೀವೀಗ 'ಕೈ' ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಆ ಬಳಿಕ ಪಡಿತರ ಚೀಟಿ ಮತ್ತು ರೈತರಿಗಾಗಿ ನಾವೇನು ಮಾಡುತ್ತೇವೆ ಎಂದು ನೋಡಿ ', ಎನ್ನುವುದರ ಮೂಲಕ ಅವರು ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದಾರೆ. 
 
ಪ್ರಧಾನಿ ವಿರುದ್ಧವೂ ಕುಹಕವಾಡಿದ ಅವರು ತನ್ನ ಸೂಟ್ ಕೊಳೆಯಾಗಬಾರೆಂದು ಪ್ರಧಾನಿ ಕೃಷಿಕರನ್ನು ಭೇಟಿಯಾಗುವುದಿಲ್ಲ. ಅಮೇರಿಕಾ ಮತ್ತು ಚೀನಾಕ್ಕೆ ಪ್ರವಾಸ ಕೈಗೊಳ್ಳುವುದನ್ನು ಮಾತ್ರ ಅವರು ಇಷ್ಟಪಡುತ್ತಾರೆ ಎಂದು ಜರಿದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಲಿ: ನಟಿ ರಮ್ಯಾ