Select Your Language

Notifications

webdunia
webdunia
webdunia
webdunia

ಪೊಲೀಸ್ ಅಧಿಕಾರಿಯನ್ನ ಬೆತ್ತಲೆಗೊಳಿಸಿ ಭೀಕರವಾಗಿ ಹತ್ಯೆ..!

ಪೊಲೀಸ್ ಅಧಿಕಾರಿಯನ್ನ ಬೆತ್ತಲೆಗೊಳಿಸಿ ಭೀಕರವಾಗಿ ಹತ್ಯೆ..!
ಶ್ರೀನಗರ , ಶುಕ್ರವಾರ, 23 ಜೂನ್ 2017 (10:39 IST)
ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪೊಲೀಸ್ ಅಧಿಕಾರಿಯನ್ನ ಉದ್ರಿಕ್ತ ಗುಂಪೊಂದು ಹೊಡೆದು ಭೀಕರವಾಗಿ ಕೊಂದಿರುವ ಘಟನೆ ವರದಿಯಾಗಿದೆ. ಶ್ರೀನಗರದ ಡಿಎಸ್`ಪಿ ಅಯೂಬ್ ಪಂಡಿತ್ ಹತ್ಯೆಗೀಡಾದ ಪೊಲೀಸ್ ಅಧಿಕಾರಿ.

ಶ್ರೀನಗರದ ನೌಹಟ್ಟಾದ ಜಾಮಿಯಾ ಮಸೀದಿ ಬಳಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಅಯೂಬ್ ಬೆಳಗಿನ ಜಾವ 12.30ರ ಸುಮಾರಿಗೆ ಮಸೀದಿಯಿಂದ ಹೊರಬರುತ್ತಿದ್ದವರ ಫೋಟೋ ತೆಗೆದಿದ್ದಾರೆ ಎನ್ನಲಾಗಿದ್ದು, ಇದರಿಂದ ಉದ್ರಿಕ್ತಗೊಂಡ ಗುಂಪು ಅಯೂಬ್ ಮೇಲೆ ಹಲ್ಲೆಗೆ ಮುಂದಾಗಿದೆ. ಬಳಿಕ ಆತ್ಮರಕ್ಷಣೆಗಾಗಿ ಅಯೂಬ್ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಮೂವರು ಗಾಯಗೊಂಡಿದ್ದು, ಡಿಎಸ್`ಪಿಯನ್ನ ಅಟ್ಟಾಡಿಸಿ ಹಿಡಿದ ಗುಂಪು ಕಲ್ಲಿನಿಂದ ಹೊಡೆದು ಕೊಂದಿದೆ.

ಹತ್ಯೆಗೂ ಮುನ್ನ ಡಿಎಸ್`ಪಿಯ ಬಟ್ಟೆ ಬಿಚ್ಚಿ ಅಪಮಾನ ಮಾಡಲಾಗಿದೆ. ನೂರಾರು ಮಂದಿಯ ಗುಂಪನ್ನ ಕಂಡ ಡಿಎಸ್`ಪಿ ಭದ್ರತಾ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷಯ ರೋಗಿಗಳಿಗೂ ಇನ್ನು ಆಧಾರ್ ಕಡ್ಡಾಯ!