Webdunia - Bharat's app for daily news and videos

Install App

ಮಾಲೀಕಳ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ..!

Webdunia
ಶನಿವಾರ, 15 ಏಪ್ರಿಲ್ 2017 (18:20 IST)
ನಾಯಿ ನಂಬಿಕಸ್ಥ ಪ್ರಾಣಿ. ತುತ್ತು ಅನ್ನ ಹಾಕಿದ ಮಾಲೀಕನ ರಕ್ಷಣೆಗೆ ಯಾವುದೇ ಹಂತದಲ್ಲೂ ಸಿದ್ಧವಿರುತ್ತದೆ ಎಂಬುದಕ್ಕೆ ಮುಂಬೈನ ಈ ಪ್ರಕರಣ ಸಾಕ್ಷಿ. ಚಾಕುವಿನಿಂದ ಇರಿಯಲು ಬಂದ ವ್ಯಕ್ತಿಯಿಂದ ತನ್ನ ಮಾಲೀಕಳನ್ನ ರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿರುವ ಘಟನೆ ಮುಂಬೈನ ಸಿಯೋನ್ ಕೋಲಿವಾಡ ಪ್ರದೇಶದಲ್ಲಿ ನಡೆದಿದೆ.

ಏನಿದು ಘಟನೆ..?: ನಾಯಿಯನ್ನ ಸಾಕಿಕೊಂಡಿದ್ದ ಸುಮತಿಯ ಸ್ನೇಹಿತೆ ತನ್ನ ಪ್ರಿಯಕರ ವೆಂಕಟೇಶನಿಂದ ದಾಳಿಗೊಳಗಾಗಿದ್ದಳು. ಚಾಕು ಹಿಡಿದು ಮನೆಗೆ ನುಗ್ಗಿದ್ದ ವೆಂಕಟೇಶ ಕೊಲೆಗೆ ಮುಂದಾಗಿದ್ದ. ಆತನಿಂದ ತಪ್ಪಿಸಿಕೊಂಡ ಆಕೆ ಸುಮತಿ ಮನೆಗೆ ಬಂದಳು. ಅಲ್ಲಿಗೂ ಹಿಂಬಾಲಿಸಿ ಬಂದಿದ್ದ ವೆಂಕಟೇಶ್`ನನ್ನ ಮನೆಗೆ ಪ್ರವೇಶಿಸದಂತೆ ಸುಮತಿ ಪ್ರತಿರೋಧ ಒಡ್ಡಿದ್ದಾಳೆ. ಈ ಸಂದರ್ಭ ಆಕೆ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಇದನ್ನ ನೋಡುತ್ತಿದ್ದ ಪೆಟ್ ಡಾಗ್ ರಿಕ್ಕಿ ವೆಂಕಟೇಶ್ ಮೇಲೆ ದಾಳಿ ನಡೆಸಿ 2 ಬಾರಿ ಕಚ್ಚಿದೆ. ಈ ಸಂದರ್ಭ ಮಾನವೀಯತೆಯನ್ನೇ ಮರೆತಿದ್ದ ಆತ ಚಾಕುವಿನಿಂದ ನಾಯಿಗೆ ಚುಚ್ಚಿ ಪರಾರಿಯಾಗಿದ್ದಾನೆ. ಮೂಕಪ್ರಾಣಿ ಮಾಲೀಕಳನ್ನ ರಕ್ಷಿಸಲು ಹೋಗಿ ಪ್ರಾಣ ಬಿಟ್ಟಿದೆ.

ಪೊಲೀಸರು ವೆಂಕಟೇಶನನ್ನ ಬಂಧಿಸಿದ್ದಾರಾದರೂ ಅಂದೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಾಯಿಯನ್ನೇ ತನ್ನ ಸರ್ವಸ್ವ ಅಂದುಕೊಂಡಿದ್ದ ಸುಮತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments