Webdunia - Bharat's app for daily news and videos

Install App

ಮಗು ನೀರಲ್ಲಿ ಮುಳುಗಿ ಸಾವನಪ್ಪಿದ್ದನ್ನು ಕಂಡು ತಂದೆ ಮಾಡಿದ್ದೇನು ಗೊತ್ತಾ?

Webdunia
ಸೋಮವಾರ, 24 ಡಿಸೆಂಬರ್ 2018 (07:15 IST)
ಕೊಯಮತ್ತೂರು : 2 ವರ್ಷದ ಮಗ ಆಕಸ್ಮಿಕವಾಗಿ ನೀರಿನ ಟ್ಯಾಂಕ್ ಗೆ ಬಿದ್ದು ಸಾವನಪ್ಪಿದ್ದನ್ನು ಕಂಡು  ಆತನ  ತಂದೆ ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ತಂದೆ ಮಣಿಕಂದನ್ (32) ಹಾಗೂ  ಮಗ ದೇಜಶ್ವಿನ್ (2 ) ಮೃತಪಟ್ಟ ದುರ್ದೈವಿಗಳು.  ತಂದೆ ಮಣಿಕಂದನ್ ತನ್ನ 5 ವರ್ಷದ ಮಗಳ ಜೊತೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದರು. ಆಗ ಅಲ್ಲೆ ಆಡುತ್ತಿದ್ದ 2ವರ್ಷದ ಮಗ ದೇಜಶ್ವಿನ್ ನೆಲಮಟ್ಟದಲ್ಲಿದ್ದ ತೆರೆದ ನೀರಿನ ಟ್ಯಾಂಕ್‌ ಗೆ ಬಿದ್ದು ಸಾವನಪ್ಪಿದ್ದಾನೆ. ಮಗ ಕಾಣದಿದ್ದಾಗ ಹುಡುಕಾಡಿದ ತಂದೆಗೆ ಮಗನ ಶವ ನೀರಿನ ಟ್ಯಾಂಕ್‌ನಲ್ಲಿ ತೇಲುತ್ತಿರುವುದು ಕಾಣಿಸಿದೆ. ಇದರಿಂದ ಆಘಾತಕ್ಕೊಳಗಾದ ಮಣಿಕಂದನ್ ರೂಂಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ತಂದೆ ಕಾಣಿಸದಿದ್ದಾಗ ಮಗಳು ಮಲಗಿದ್ದ  ತಾಯಿಯನ್ನು ಎಬ್ಬಿಸಿದ್ದಾಳೆ. ಆಗ ತಾಯಿ ರೂಂ ಬಾಗಿಲು ತೆಗೆಯಲಾಗದೆ ಕಿಟಕಿಯಿಂದ ನೋಡಿದಾಗ ಪತಿ ನೇಣಿನ ಕುಣಿಕೆಯಲ್ಲಿ ತೂಗುತ್ತಿರುವುದು ಕಾಣಿಸಿದೆ. ನಂತರ ಆಕೆ ಕಿರುಚಾಡಿದ್ದು, ಇದನ್ನು ಕೇಳಿ ಓಡಿಬಂದ ನೆರೆಹೊರೆಯವರು ಮಗುವನ್ನು ಹುಡುಕಿದಾಗ ಮಗುವಿನ ಶವ ನೀರಿನ ಟ್ಯಾಂಕಿನಲ್ಲಿ ಕಂಡುಬಂದಿದೆ.


ಈ ದಂಪತಿಗೆ ಮದುವೆಯಾಗಿ 6 ವರ್ಷವಾಗಿತ್ತು. ತನ್ನ ಇಬ್ಬರು ಮಕ್ಕಳು ಹಾಗೂ ಗಂಡನ ಜೊತೆ ಸುಖದ ಸಂಸಾರ ನಡೆಸಿದ್ದ ತಾಯಿ ಪೂವಿತಾ ಇದೀಗ ಪತಿ ಮತ್ತು ಮಗುವನ್ನು ಕಳೆದುಕೊಂಡು ರೋದಿಸುತ್ತಿರುವುದನ್ನು ನೋಡಿದರೆ ಎಂತವರ ಮನಸ್ಸು ಕೂಡ ಕರಗುತ್ತದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments