Webdunia - Bharat's app for daily news and videos

Install App

ಪುತ್ರಿಯ ಮೇಲೆ ರೇಪ್ ಎಸಗಿದವನಿಗೆ ತಂದೆ ಏನ್ ಮಾಡ್ದ ಗೊತ್ತಾ?

Webdunia
ಸೋಮವಾರ, 6 ನವೆಂಬರ್ 2023 (10:55 IST)
ನೆರೆಯನೆಯ ಯುವಕ ಅತ್ಯಾಚಾರ ಎಸಗಿದ್ದರಿಂದ 14 ವರ್ಷದ ಆತನ ಮಗಳು ಗರ್ಭಿಣಿಯಾಗಿದ್ದಳು. ನಡೆದ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದ. ಆದರೆ ಬಾಲಕಿ ಈ ವಿಷಯವನ್ನು ಪಾಲಕರ ಬಳಿ ಹೇಳಿಕೊಂಡಿದ್ದಾಳೆ. ವೈದ್ಯಕೀಯ ವರದಿ ಕೂಡ ಕೃತ್ಯವನ್ನು ಸಾಬೀತು ಪಡಿಸಿವೆ.

ಅತ್ಯಾಚಾರ ಆರೋಪಿ ಬಾಲಕಿಯ ಮನೆಗೆ ತೀರ ಆಪ್ತನಾಗಿದ್ದು, ಮನೆಯ ಸದಸ್ಯ ಎಂದು ತಿಳಿದ ವ್ಯಕ್ತಿಯಿಂದ ವಿಶ್ವಾಸಘಾತುಕತೆಯಾಗಿರುವುದು ಬಾಲಕಿಯ ತಂದೆಯನ್ನು ಕೆರಳಿಸಿದೆ. ಈ ಕಾರಣಕ್ಕೆ ಆತ ಅತ್ಯಾಚಾರಿಯ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಕೊಲೆಗೈದ ಪೀಡಿತಳ ತಂದೆ, ಆತನ ಜನನಾಂಗವನ್ನು ಕೂಡ ಸುಟ್ಟು ಹಾಕಿದ  ಘಟನೆ ನವದೆಹಲಿಯಲ್ಲಿ ವರದಿಯಾಗಿದೆ. 36 ವರ್ಷದ ಕೊಲೆ ಆರೋಪಿ ಕಳೆದ ವಾರ ಪೋಲಿಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಆರೋಪಿಯ ಪತ್ನಿ "ನನ್ನ ಗಂಡ ಜೆಂಟಲ್ ಮ್ಯಾನ್.  ಅವನನ್ನು ನನ್ನಷ್ಟು ಹತ್ತಿರದಿಂದ ಬಲ್ಲವರು ಯಾರೂ ಇಲ್ಲ.  ತಪ್ಪು ಮಾಡಿ ಶಿಕ್ಷೆಗೊಳಗಾಗದೇ ಓಡಾಡಿಕೊಂಡಿರುವ ಅತ್ಯಾಚಾರಿ ಆರೋಪಿಗಳಿಗೆ ಎಚ್ಚರಿಕೆಯಾಗಬೇಕೆಂದು ಈ ಕೃತ್ಯ ಎಸಗಿದ್ದೇನೆ ಎಂದು ಪತಿ ನನ್ನ ಬಳಿ ಹೇಳಿಕೊಂಡಿದ್ದಾನೆ" ಎಂದು ಗಂಡನನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಾಳೆ. 
 
"ಅಲ್ಲದೇ ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಇನ್ನು ಕೂಡ ಗಲ್ಲಿಗೇರಿಸದಿರುವುದು ಅವರ ಮೇಲೆ ಪರಿಣಾಮ ಬೀರಿತ್ತು. ತನ್ನ ಮಗಳಿಗೆ ಎಂದಿಗೂ ನ್ಯಾಯ ಸಿಗದು. ಆದ್ದರಿಂದ ನಾನೇ ನನ್ನ ಮಗಳಿಗೆ ನ್ಯಾಯ ಕೊಡಿಸಬೇಕು" ಎಂದು ನಿರ್ಧರಿಸಿದರು ಎಂದು ಆಕೆ ಹೇಳುತ್ತಾಳೆ. 
 
"ಅತ್ಯಾಚಾರಿಯ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆ ಹಿಸುಕಿ ಆತನನ್ನು ಕೊಲೆಗೈದ ಪೀಡಿತ ಬಾಲಕಿಯ ತಂದೆ ನಂತರ ಉಕ್ಕಿನ ಚಾಕುವೊಂದನ್ನು ಬಿಸಿ ಮಾಡಿ ಆತನ ಜನನಾಂಗಗಳನ್ನು ಸುಟ್ಟು ಹಾಕಿದ್ದಾನೆ " ಎಂದು ತನಿಖಾಧಿಕಾರಿ ಅರವಿಂದ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ

ಮುಂದಿನ ಸುದ್ದಿ
Show comments