Select Your Language

Notifications

webdunia
webdunia
webdunia
webdunia

ಇಂದು ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ; ಇಂದಾದರೂ ಡಿಕೆಶಿಗೆ ಸಿಗುತ್ತಾ ಬೇಲ್?

ಇಂದು ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ; ಇಂದಾದರೂ ಡಿಕೆಶಿಗೆ ಸಿಗುತ್ತಾ ಬೇಲ್?
ನವದೆಹಲಿ , ಸೋಮವಾರ, 14 ಅಕ್ಟೋಬರ್ 2019 (10:47 IST)
ನವದೆಹಲಿ : ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ದೆಹಲಿಯ ಹೈಕೋರ್ಟ್ ನಲ್ಲಿ ನಡೆಯಲಿದೆ.




ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇಡಿ ಬಂಧನಕ್ಕೆ ಸಿಲುಕಿ ತಿಹಾರ ಜೈಲು ಸೇರಿದ ಡಿಕೆಶಿ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಈ ಹಿಂದೆ ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ದಸರಾ ಹಬ್ಬದ ಪ್ರಯುಕ್ತ ವಿಚಾರಣೆ ಮುಂದೂಡಿತ್ತು.


ಆದರೆ ಇಂದು ದೆಹಲಿಯ ಹೈಕೋರ್ಟ್ ನ ನ್ಯಾ.ಸುರೇಶ ಕುಮಾರ್ ಕೈಟಾ ನೇತೃತ್ವದಲ್ಲಿ ಮತ್ತೆ ಡಿಕೆಶಿಯವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಇಂದಾದರೂ ಡಿಕೆಶಿಗೆ ಬೇಲ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

7ನೇ ತರಗತಿಯ ವಿದ್ಯಾರ್ಥಿಗಳಿಗೊಂದು ಸಿಹಿಸುದ್ದಿ