Webdunia - Bharat's app for daily news and videos

Install App

ಇಹಲೋಕ ತ್ಯಜಿಸಿದ ಮೇಲೂ ಜಯಲಲಿತಾ ಪಕ್ಷದೊಂದಿಗೆ ಕರುಣಾನಿಧಿಗೆ ತಿಕ್ಕಾಟ

Webdunia
ಬುಧವಾರ, 8 ಆಗಸ್ಟ್ 2018 (09:56 IST)
ಚೆನ್ನೈ: ಬದುಕಿದ್ದಾಗ ಜಯಲಲಿತಾ ಮತ್ತು ಕರುಣಾನಿಧಿ ಪರಸ್ಪರ ರಾಜಕೀಯವಾಗಿ ಕೆಸರೆರಚಾಟ ನಡೆಸಿಕೊಂಡೇ ಬಂದವರು. ವಿಪರ್ಯಾಸವೆಂದರೆ ಕರುಣಾನಿಧಿ ತೀರಿಕೊಂಡ ಮೇಲೂ ಈಗ ಜಯಲಲಿತಾ ಪಕ್ಷದೊಂದಿಗೆ ಗುದ್ದಾಟ ನಡೆಸಬೇಕಿದೆ.
 

ಮರೀನಾ ಬೀಚ್ ನಲ್ಲಿ ಅಂತ್ಯಕ್ರಿಯೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಯಲಲಿತಾರ ಆಡಳಿತಾರೂಢ ಎಐಎಡಿಎಂಕೆ ಪಕ್ಷ ತಕರಾರು ತೆಗೆದಿದೆ. ಇದರ ವಿಚಾರಣೆ ಮದ್ರಾಸ್ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಜಯಲಲಿತಾ ಸಮಾಧಿಗೆ ಅವಕಾಶ ಮಾಡಿಕೊಟ್ಟಿರುವಾಗ ಕರುಣಾನಿಧಿಗೆ ಯಾಕೆ ಅವಕಾಶ ಕೊಡುತ್ತಿಲ್ಲ. ಏಳು ದಿನಗಳ ಶೋಕಾಚರಣೆ ಮಾಡುತ್ತೀರಿ. ಹಾಗಿದ್ದರೆ ಸಮಾಧಿಗೆ ಜಾಗ ಕೊಡಲು ಹಿಂದೇಟು ಹಾಕುತ್ತಿರುವುದೇಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಆದರೆ ಕರುಣಾನಿಧಿ ಹಾಲಿ ಸಿಎಂ ಅಲ್ಲ ಎಂದು ಎಐಎಡಿಎಂಕೆ ವಾದ ಮಂಡಿಸಿದೆ. ಜಯಲಲಿತಾಗೆ ತಮ್ಮ ರಾಜಕೀಯ ಗುರುವಿನ ಜತೆಗೆ ಸಮಾಧಿ ಮಾಡಲು ಅವಕಾಶ ಕೊಟ್ಟಿರುವಾಗ ಕರುಣಾನಿಧಿಗೆ ಯಾಕೆ ಕೊಡುತ್ತಿಲ್ಲ ಎಂದು ಡಿಎಂಕೆ ಬೇಸರ ವ್ಯಕ್ತಪಡಿಸಿದೆ. ಅಂತೂ ಪ್ರಮುಖ ನಾಯಕನೊಬ್ಬನ ಅಗಲುವಿಕೆಯ ಸಂದರ್ಭದಲ್ಲೂ ಈ ರೀತಿಯ ರಾಜಕೀಯ ಕೆಸರೆರಚಾಟ ನಡೆಯುತ್ತಿರುವುದು ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments