Select Your Language

Notifications

webdunia
webdunia
webdunia
webdunia

ಸರ್ಪ್ರೈಸ್ ಆಗಿ ಪ್ರೀತಿ ನಿವೇದನೆ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ಸರ್ಪ್ರೈಸ್ ಆಗಿ ಪ್ರೀತಿ ನಿವೇದನೆ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ
ನವದೆಹಲಿ , ಸೋಮವಾರ, 19 ಜೂನ್ 2017 (11:10 IST)
ನವದೆಹಲಿ: ಪ್ರೀತಿ ನಿವೇದನೆಗೆಂದು ಪತ್ನಿಯನ್ನು ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. 
 
24 ವರ್ಷದ ಮನೋಜ್ ಕುಮಾರ್ ಪತ್ನಿಗೆ ಪ್ರೀತಿಯ ನಿವೇದನೆ ಮಾಡುವುದಾಗಿ ಹೇಳಿ ನಂಬಿಸಿ ಉತ್ತರ ದೆಹಲಿಯ ಬೊಂಟಾ ಉದ್ಯಾನವನಕ್ಕೆ ಕರೆದೊಯ್ದಿದ್ದಾನೆ. ನಂತರ ತಂತಿಯಿಂದ ಆಕೆಯ ಕತ್ತನ್ನು ಸೀಳಿ ಹತ್ಯೆ ಮಾಡಿದ್ದಾನೆ. 
 
ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಸ್ಥಳದಲ್ಲಿಯೇ ಬಿಟ್ಟಿರುವ ಆರೋಪಿ ನಂತರ ತನ್ನ ಗೆಳೆಯರಿಗೆ ಕರೆ ಮಾಡಿ ಪತ್ನಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಕೂಡಲೇ ಮನೋಜ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ. 
 
ಪತ್ನಿ ಕೆಲ ದಿನಗಳ ಹಿಂದಷ್ಟೇ ಪತಿಯನ್ನು ಬಿಟ್ಟು ಪೋಷಕರ ಮನೆಯಲ್ಲಿ ನೆಲೆಸಿದ್ದಳು ಎನ್ನಲಾಗಿದೆ.  
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ನಾಳೆ ಸಿಗಲಿದೆ ಉತ್ತರ