Webdunia - Bharat's app for daily news and videos

Install App

ಅನುಮಾನ; ಪತ್ನಿಯ ಮಾಜಿ ಪತಿ ತಲೆ ಕತ್ತರಿಸಿ ಮುಗಿಸಿಯೇ ಬಿಟ್ಟ

Webdunia
ಗುರುವಾರ, 8 ಸೆಪ್ಟಂಬರ್ 2016 (12:42 IST)
ತನ್ನ ಪತ್ನಿ ಜತೆ ದೈಹಿಕ ಸಂಬಂಧವನ್ನು ಮುಂದುವರೆಸಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮಾಜಿ ಪತಿಯ ತಲೆ ಕತ್ತರಿಸಿ ಬರ್ಬರವಾಗಿ ಕೊಲೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ. 

 
ಆರೋಪಿಯನ್ನು 35 ವರ್ಷದ ಮುಕೇಶ್ ಎಂದು ಗುರುತಿಸಲಾಗಿದ್ದು ಮಂಗೋಲ್ಪುರಿ ಪ್ರದೇಶದ ನಿವಾಸಿಯಾಗಿರುವ ಈತ ಗುರ್ಗಾಂವ್‌ನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಪ್ರಿಯಾಂಕಾ ತನ್ನ ಮಾಜಿ ಪತಿ ರೋಹಿತ್‌ನ ಜತೆ ವಿಚ್ಛೇದನದ ಬಳಿಕವೂ ಸಂಪರ್ಕವನ್ನಿಟ್ಟುಕೊಂಡಿದ್ದಳು. ಆಕೆ ರೋಹಿತ್‌‌ನನ್ನು ಆಗಾಗ ಭೇಟಿಯಾಗುತ್ತಿದುದನ್ನು ಸಹಿಸದಾದ ಮುಕೇಶ್ ಪತ್ನಿಯ ಅಪ್ರಾಪ್ತ ಸಹೋದರನ ಜತೆ ಸೇರಿ ಆತನನ್ನು ಮುಗಿಸುವ ಯೋಜನೆ ರೂಪಿಸಿದ. ಅದರಂತೆ ಆತನ ತಲೆ ಕತ್ತರಿಸಿ ಹತ್ಯೆಗೈದ.
 
ಸೆಪ್ಟೆಂಬರ್ 6 ರಂದು ರೋಹಿತ್ ತಂದೆ ಅಶೋಕ್ ಕುಮಾರ್ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಮುಕೇಶ್, ಆತನ ಮೈದುನ ಮತ್ತು ಇತರ ಇಬ್ಬರು ಆರೋಪಿಗಳಾದ ವಿಜಯ್ ಮತ್ತು ಅಶ್ರಫ್‌ನನ್ನು ಬಂಧಿಸಿದ್ದಾರೆ. 
 
ಆಗಸ್ಟ್ 6 ರಂದು ರೋಹಿತ್‌ನನ್ನು ಮನೆಗೆ ಆಹ್ವಾನಿಸಿ ಕಂಠಪೂರ್ತಿ ಮದ್ಯ ಕುಡಿಸಿ ತಾನು ಚಲಾಯಿಸುತ್ತಿದ್ದ ವಾಹನದಲ್ಲಿ ಕರೆದುಕೊಂಡು ಹೋಗಿ ದಾರಿ ಮಧ್ಯೆ ಹತ್ಯೆಗೈದು ದೇಹವನ್ನು ಸೀಮೆಎಣ್ಣೆ ಹಾಕಿ ಸುಟ್ಟಿ, ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿ ಮಣ್ಣಿನಡಿ ಮುಚ್ಚಿ ಹಾಕಿದ್ದಾಗಿ ಮುಕೇಶ್ ಬಾಯ್ಬಿಟ್ಟಿದ್ದಾನೆ. 
 
ಹುಗಿದು ಹಾಕಲಾಗಿದ್ದ ತಲೆಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಾ ರಘುವಂಶಿ ಪ್ರಕರಣ: ಸೋನಮ್ ಜತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಅರೆಸ್ಟ್‌, ಇವರ ಪಾತ್ರವೇನು ಗೊತ್ತಾ

ದೊಡ್ಡ ದುರಂತ ಬೆನ್ನಲ್ಲೇ ಏರ್‌ ಇಂಡಿಯಾಗೆ ಬಾಂಬ್ ಬೆದರಿಕೆ: ನವದೆಹಲಿಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ

ಬೃಹತ್‌ ರ‍್ಯಾಲಿ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹರಿದ ಜಗನ್‌ಮೋಹನ್‌ ರೆಡ್ಡಿ ಕಾರು

ಇರಾನ್‌– ಇಸ್ರೇಲ್‌ ಸಂಘರ್ಷ ಶಮನಕ್ಕೆ ಮೋದಿ ರಂಗಪ್ರವೇಶ: ಭಾರತದ ಪ್ರಧಾನಿಗೆ ಧನ್ಯವಾದ ಹೇಳಿದ ಇರಾನ್

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಮುಂದಿನ ಸುದ್ದಿ
Show comments