Webdunia - Bharat's app for daily news and videos

Install App

ಹೃದಯವಿದ್ರಾವಕ: ಮಗುವನ್ನು ರಕ್ಷಿಸಲು ಸಿಂಹಗಳನ್ನೇ ಎದುರಿಸಿದ ತಾಯಿ (ವಿಡಿಯೋ)

Webdunia
ಗುರುವಾರ, 8 ಸೆಪ್ಟಂಬರ್ 2016 (11:28 IST)
ತಾಯಿ ಎಂದರೆ ಅದಕ್ಕೆ ಸಾಟಿಯಾದುದು ಏನೂ ಇಲ್ಲ. ತಾನು ಹಡೆದ ಮಕ್ಕಳಿಗಾಗಿ ಜೀವವನ್ನು ನೀಡಲು ಆಕೆ ಹಿಂದೆ ಮುಂದೆ ನೋಡುವುದಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ. ಸಿಂಹದ ಬಾಯಿಗೆ ಸಿಕ್ಕ ಮಗುವನ್ನು ರಕ್ಷಿಸಲು ತಾಯಿ ಜಿರಾಫೆಯೊಂದು ಸಾಕಷ್ಟು ಹರಸಾಹಸ ಮಾಡಿದ ದೃಶ್ಯಾವಳಿಯೊಂದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಹೃದಯ ಕಲಕುವಂತಿದೆ. 

ದಕ್ಷಿಣ ಆಫ್ರಿಕಾದ ಪಲನ್ಸ್ ಬರ್ಗ್ ಗೇಮ್ ರಿಸರ್ವ್‌‌ನಲ್ಲಿ ಈ ಕಣ್ಣೀರು ತರಿಸುವ ದೃಶ್ಯಾವಳಿಯನ್ನು ಸೆರೆ ಹಿಡಿಯಲಾಗಿದೆ. 
 
ತಾಯಿ ಮತ್ತು ಮಗು ಜಿರಾಫೆ ಸಂತೋಷದಿಂದ ವಿಹರಿಸುತ್ತಿದ್ದಾಗ ಸಿಂಹದ ಗುಂಪು ದಾಳಿ ಮಾಡಿದೆ. ತಾಯಿ ಸಿಂಹದ ಬಾಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಯಿತು. ಆದರೆ ಮರಿ, ಕಾಡಿನ ರಾಜನ ಬಾಯಿಗೆ ಸಿಕ್ಕಿ ಬಿದ್ದಿದೆ. ಮಗುವನ್ನು ರಕ್ಷಿಸಲು ತಾಯಿ ಸಿಂಹವನ್ನೇ ಎದುರಿಸಲು ನಿಂತಿದ್ದಾಳೆ. ಆದರೆ ಆ ಕ್ರೂರ ಪ್ರಾಣಿಯ ಮುಂದೆ ತಾಯಿಯ ಆಟ ನಡೆದಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಮುದ್ದು ಮರಿ ರಸ್ತೆ ಬದಿಯಲ್ಲಿ ಬಂದು ಬಿದ್ದಿದೆ. ಒದ್ದಾಡುತ್ತಿದ್ದ ಮಗುವಿನ ಮುಂದೆ ನಿಸ್ಸಹಾಯಕಳಾಗಿ ಸುತ್ತಾಡುತ್ತಿದ್ದ ತಾಯಿ ಶವವನ್ನು ಎಳೆದೊಯ್ಯಲು ಬಂದ ಸಿಂಹಗಳನ್ನು ಮತ್ತೆ ಓಡಿಸಿದೆ.  ಕೊನೆಗೂ ಆ ತಾಯಿಯ ಮಗುವನ್ನು ಎಳೆದೊಯ್ದ ಸಿಂಹಗಳು ಆಕೆಯ ಮುಂದೆಯೇ ಅದನ್ನು ತಿಂದು ಮುಗಿಸಿವೆ. 
 
ತನ್ನ ಮರಿ ಸತ್ತ ಎರಡು ದಿನಗಳಾದರೂ ತಾಯಿ ಅದೇ ಪ್ರದೇಶದಲ್ಲಿ ಸುತ್ತಾಡುತ್ತಿತ್ತು ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ. 

ಹೃದಯವಿದ್ರಾವಕ: ಮಗುವನ್ನು ರಕ್ಷಿಸಲು ಸಿಂಹಗಳನ್ನೇ ಎದುರಿಸಿದ ತಾಯಿ (ವಿಡಿಯೋ)

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಾ ರಘುವಂಶಿ ಪ್ರಕರಣ: ಸೋನಮ್ ಜತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಅರೆಸ್ಟ್‌, ಇವರ ಪಾತ್ರವೇನು ಗೊತ್ತಾ

ದೊಡ್ಡ ದುರಂತ ಬೆನ್ನಲ್ಲೇ ಏರ್‌ ಇಂಡಿಯಾಗೆ ಬಾಂಬ್ ಬೆದರಿಕೆ: ನವದೆಹಲಿಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ

ಬೃಹತ್‌ ರ‍್ಯಾಲಿ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹರಿದ ಜಗನ್‌ಮೋಹನ್‌ ರೆಡ್ಡಿ ಕಾರು

ಇರಾನ್‌– ಇಸ್ರೇಲ್‌ ಸಂಘರ್ಷ ಶಮನಕ್ಕೆ ಮೋದಿ ರಂಗಪ್ರವೇಶ: ಭಾರತದ ಪ್ರಧಾನಿಗೆ ಧನ್ಯವಾದ ಹೇಳಿದ ಇರಾನ್

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಮುಂದಿನ ಸುದ್ದಿ
Show comments