Select Your Language

Notifications

webdunia
webdunia
webdunia
webdunia

ದೆಹಲಿ ಸ್ಫೋಟ ಪ್ರಕರಣ, ಎಲ್ಲ ಆರೋಪಿಗಳ ಎನ್‌ಐಎ ಕಸ್ಟಡಿ ವಿಸ್ತರಣೆ

Delhi Port Blast Case

Sampriya

ನವದೆಹಲಿ , ಸೋಮವಾರ, 8 ಡಿಸೆಂಬರ್ 2025 (16:41 IST)
ನವದೆಹಲಿ: ನವೆಂಬರ್ 10 ರ ಕೆಂಪುಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ವೈದ್ಯರು ಮತ್ತು ಬೋಧಕನ ಎನ್‌ಐಎ ಕಸ್ಟಡಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ.

ಎಲ್ಲ ನಾಲ್ವರು ಆರೋಪಿಗಳಾದ ಡಾ ಮುಝಮ್ಮಿಲ್ ಗನೈ, ಡಾ ಅದೀಲ್ ರಾಥರ್, ಡಾ ಶಹೀನಾ ಸಯೀದ್ ಮತ್ತು ಮೌಲ್ವಿ ಇರ್ಫಾನ್ ಅಹ್ಮದ್ ವಾಗೇ ಅವರನ್ನು ನವೆಂಬರ್ 29 ರಂದು ನೀಡಲಾಗಿದ್ದ 10 ದಿನಗಳ ಎನ್‌ಐಎ ಕಸ್ಟಡಿ ಅವಧಿ ಮುಗಿದ ನಂತರ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಅಂಜು ಬಜಾಜ್ ಚಂದನಾ ಅವರ ಮುಂದೆ ಹಾಜರುಪಡಿಸಲಾಯಿತು.

ಪಟಿಯಾಲ ಹೌಸ್ ಜಿಲ್ಲಾ ನ್ಯಾಯಾಲಯದ ಆವರಣ ಮತ್ತು ಸುತ್ತಮುತ್ತ ಬಿಗಿ ಭದ್ರತೆಯಲ್ಲಿ ನಡೆದ ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡಲು ಮಾಧ್ಯಮದವರನ್ನು ನಿರ್ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭೇದಿಸಿದ 'ವೈಟ್ ಕಾಲರ್' ಭಯೋತ್ಪಾದನಾ ಘಟಕಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇದುವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಳು ಮಂದಿಯನ್ನು ಬಂಧಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ಕೆಎನ್ ರಾಜಣ್ಣ ಹೇಳಿಕೆ