ಕನ್ನಡ ಬರಲ್ವಾ, ದೆಹಲಿಗೆ ಬನ್ನಿ: ಬೆಂಗಳೂರಿಗೆ ಅವಮಾನಿಸಿದ ದೆಹಲಿ ಕಂಪನಿ ಸಿಇಒ

Krishnaveni K
ಶನಿವಾರ, 21 ಡಿಸೆಂಬರ್ 2024 (10:22 IST)
Photo Credit: X
ನವದೆಹಲಿ: ಇತ್ತೀಚೆಗೆ ಪರ ರಾಜ್ಯದವರು ಕರ್ನಾಟಕದಲ್ಲಿರುವ ಕಂಪನಿಗಳಿಗೆ ಗಾಳ ಹಾಕುವುದು ಸಾಮಾನ್ಯವಾಗಿದೆ. ಆದರೆ ದೆಹಲಿಯ ಕಂಪನಿಯೊಂದು ಬೆಂಗಳೂರಿಗ ಅವಮಾನವಾಗುವಂತಹ ಜಾಹೀರಾತು ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ದೆಹಲಿ ಮೂಲದ ಕಂಪನಿಯೊಂದರ ಸಿಇಒ ವಿಕ್ರಮ್ ಚೋಪ್ರಾ ಎಂಬವರು ಜಾಹೀರಾತೊಂದನ್ನು ನೀಡಿದ್ದ ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ. ಈ ಜಾಹೀರಾತಿನಲ್ಲಿ ‘ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದರೂ ನಿಮಗೆ ಕನ್ನಡ ಬರಲ್ವಾ? ಚಿಂತೆಯಿಲ್ಲ, ನೀವು ದೆಹಲಿಗೆ ಬನ್ನಿ’ ಎಂದು ಜಾಹೀರಾತು ನೀಡಿದ್ದಾರೆ.

ವಿಕ್ರಮ್ ಚೋಪ್ರಾ ಕ್ರಿಯಾತ್ಮಕವಾಗಿ ನೀಡಿರುವ ಜಾಹೀರಾತಾದರೂ ಇದು ಬೆಂಗಳೂರಿಗೆ ಮಾಡಿದ ಅವಮಾನ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹಿಂದಿ ಭಾಷಿಕರು ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ವಿಚಾರಕ್ಕೆ ಟೀಕೆಗೊಳಗಾಗಿರುವ ಹಿನ್ನಲೆಯಲ್ಲಿ ಈ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನೀವು ಏನೇ ಮಾಡಿದರೂ ಬೆಂಗಳೂರಿನಷ್ಟು ನಿಮ್ಮ ದೆಹಲಿ ವಾಸ ಯೋಗ್ಯವಲ್ಲ. ಇಲ್ಲಿ ಅಲ್ಲಿನಷ್ಟು ವಾಯುಮಾಲಿನ್ಯವಲ್ಲ. ಹಾಗಾಗಿ ನಾವು ಬರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಿಯುವ ಯೋಗ್ಯತೆ ಇಲ್ಲ ಅಂದರೆ ಇಲ್ಲಿಂದ ಆರಾಮವಾಗಿ ಜಾಗ ಖಾಲಿ ಮಾಡಿ. ಅದರ ಬದಲು ಬೆಂಗಳೂರು ಬಿಟ್ಟು ದೆಹಲಿಯೇ ಚೆನ್ನಾಗಿದೆ ಎಂಬ ದುರಹಂಕಾರ ಯಾಕೆ ಎಂದು ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ವಿಳಂಬವಿಲ್ಲ, ನಿರ್ಲಕ್ಷ್ಯವಿಲ್ಲ, ಸಾಬೂಬುಗಳನ್ನು ಹೇಳಲಿಲ್ಲ

ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಸಮಾಧಿ ಬಗ್ಗೆ ಮಾತು: ಸಂಸತ್ ನಲ್ಲಿ ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

ವಿಚಾರಣೆ ಬಿಟ್ಟು ದೆಹಲಿಯಿಂದ ತುರ್ತಾಗಿ ರಾಜ್ಯಕ್ಕೆ ವಾಪಾಸ್ಸಾದ ಡಿಕೆ ಶಿವಕುಮಾರ್, ಕಾರಣ ಗೊತ್ತಾ

ಮುಂದಿನ ಸುದ್ದಿ
Show comments