Select Your Language

Notifications

webdunia
webdunia
webdunia
webdunia

ಪೈಲಟ್ ಮಾಡಿದ ಡ್ರಾಮಾಕ್ಕೆ ವಿಮಾನ ಹಾರದೆ 1 ಗಂಟೆ ಕಾದು ಸುಸ್ತಾದ ಡಿಸಿಎಂ ಏಕನಾಥ ಶಿಂದೆ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ

Sampriya

ಮುಂಬೈ , ಶನಿವಾರ, 7 ಜೂನ್ 2025 (16:06 IST)
Photo Courtesy X
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಜಲಗಾಂವ್ ನಿಂದ ಮುಂಬೈಗೆ ಪ್ರಯಾಣ ಬೆಳೆಸುವ ಒಂದು ಗಂಟೆಗಳ ಕಾಲ ವಿಳಂಬವಾದ ಘಟನೆ ನಡೆದಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಯಾಣ ವಿಳಂಬಕ್ಕೆ ಅವರ ವೈಯಕ್ತಿಕ ವಿಮಾನ ಪೈಲೆಟ್ ಕಾರಣ ಎಂದು ತಿಳಿದುಬಂದಿದೆ. ತನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ನೆಪ ನೀಡಿದ ಕಾರಣ ಏಕನಾಥ್ ಶಿಂಧೆ ಅವರು ವಿಮಾನ ಹತ್ತಲು ತಡವಾಯಿತು. 

ಮೂಲಗಳ ಪ್ರಕಾರ, ಶಿವಸೇನಾ ಮುಖ್ಯಸ್ಥರು ಜಲಗಾಂವ್ ನಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ, ಅಲ್ಲಿ ಅವರು ಮುಕ್ತೈನಗರದ ಸಂತ ಮುಕ್ತೈನ 'ಪಾಲ್ಖಿ ಯಾತ್ರೆ' (ಧಾರ್ಮಿಕ ಮೆರವಣಿಗೆ)ಯಲ್ಲಿ ಭಾಗವಹಿಸಿದ್ದರು.

ಉಪಮುಖ್ಯಮಂತ್ರಿಗಳು ಮಧ್ಯಾಹ್ನ 3.45 ಕ್ಕೆ ಜಲಗಾಂವ್ ಗೆ ಬರಬೇಕಿತ್ತು ಆದರೆ ತಾಂತ್ರಿಕ ಕಾರಣಗಳಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ವಿಳಂಬವಾಯಿತು. ಅವರು ಆಗಮಿಸಿದಾಗ, ಅವರು ರಸ್ತೆ ಮೂಲಕ ಮುಕ್ತೈನಗರಕ್ಕೆ ಪ್ರಯಾಣ ಬೆಳೆಸಿದರು.

ಅವರೊಂದಿಗೆ ಸಚಿವರಾದ ಗಿರೀಶ್ ಮಹಾಜನ್ ಮತ್ತು ಗುಲಾಬ್ರಾವ್ ಪಾಟೀಲ್ ಮತ್ತು ಕೆಲವು ಇತರ ಆಡಳಿತ ಅಧಿಕಾರಿಗಳು ಇದ್ದರು.

ಪಾಲ್ಖಿ ಯಾತ್ರೆಯಲ್ಲಿ ಭಾಗವಹಿಸಿ ಸಂತ ಮುಕ್ತೈ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಶಿಂಧೆ ಮತ್ತು ಅವರ ತಂಡವು ರಾತ್ರಿ 9.15 ಕ್ಕೆ ಜಲಗಾಂವ್ ವಿಮಾನ ನಿಲ್ದಾಣಕ್ಕೆ ಮರಳಿತು. ಆದರೆ, ಪೈಲಟ್ ತನ್ನ ಕೆಲಸದ ಸಮಯ ಮುಗಿದಿದೆ ಎಂದು ಹೇಳಿ ವಿಮಾನ ಹಾರಿಸಲು ನಿರಾಕರಿಸಿದರು. ತನ್ನ ಕರ್ತವ್ಯದ ಸಮಯ ಮುಗಿದಿರುವುದರಿಂದ, ಹೊಸ ಅನುಮತಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಪೈಲಟ್ ಅನಾರೋಗ್ಯದ ಕಾರಣ ಟೇಕ್ ಆಫ್ ಮಾಡಲು ನಿರಾಕರಿಸಿದ್ದಾಗಿ ಮೂಲಗಳು ತಿಳಿಸಿವೆ.

ಕೊನೆಗೆ ಸಚಿವರಾದ ಮಹಾಜನ್‌, ಪಾಟೀಲ್ ಮತ್ತು ಇತರ ಅಧಿಕಾರಿಗಳು ಪೈಲಟ್‌ನ ಮನವೊಲಿಸುವಲ್ಲಿ ಯಶಸ್ವಿಯಾದರು.  

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿಯವರು ಈಗ ಎಲ್ಲಿದ್ದಾರೆ: ಶೋಭಾ ಕರಂದ್ಲಾಜೆ