Select Your Language

Notifications

webdunia
webdunia
webdunia
webdunia

ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಮುಖಂಡ ದಯಾಶಂಕರ್ ಬಂಧನ

ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಮುಖಂಡ ದಯಾಶಂಕರ್ ಬಂಧನ
ಪಾಟ್ನಾ , ಶುಕ್ರವಾರ, 29 ಜುಲೈ 2016 (16:35 IST)
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಉಚ್ಚಾಟಿತ ಮುಖಂಡ ದಯಾಸಂಕರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
 
ಕಳೆದ ಜುಲೈ 19 ರಂದು ದಯಾಶಂಕರ್ ಸಿಂಗ್ ಪತ್ರಿಕಾಗೋಷ್ಠಿ ನಡೆಸಿ, ಟಿಕೆಟ್ ಮಾರಿಕೊಳ್ಳುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವೇಶ್ಯೆಗಿಂತ ಕಡೆ ಎಂದು ಹೇಳಿಕೆ ನೀಡಿ ನಾಪತ್ತೆಯಾಗಿದ್ದ ದಯಾಶಂಕರ್‌ನನ್ನು ಬಿಹಾರ್ ರಾಜ್ಯದ ಬುಕ್ಸಾರ್‌ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
 
ದಯಾಶಂಕರ್ ಹೇಳಿಕೆ ನೀಡಿದ ಮಾರನೇ ದಿನವೇ ಬಿಜೆಪಿ ಹೈಕಮಾಂಡ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿತ್ತು.
 
ಉತ್ತರಪ್ರದೇಶದ ವಿಶೇಷ ಜಂಟಿ ಪೊಲೀಸ್ ತಂಡ ದಯಾಶಂಕರ್‌ರನ್ನು ಬುಕ್ಸಾರ್‌ನ ಚಿನಿ ಮಿಲ್ ಪ್ರದೇಶದಲ್ಲಿ ಬಂಧಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಯಾದವ್ ತಿಳಿಸಿದ್ದಾರೆ. 
 
ದಯಾಶಂಕರ್‌ಗೆ ಬಿಹಾರ್‌ನಲ್ಲಿ ವಾಸಿಸಲು ಯಾರು ನೆರವು ನೀಡಿದ್ದರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದ್ದು, ಅವರನ್ನು ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಯಾದವ್ ಮಾಹಿತಿ ನೀಡಿದ್ದಾರೆ. 
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಕೊಲ್ಲ ಬರುತ್ತಿದ್ದಾರೆ, ರಕ್ಷಿಸಿ: ಕೇಜ್ರಿವಾಲ್ ಫೇಸ್‌ಬುಕ್ ವಾಲ್