Select Your Language

Notifications

webdunia
webdunia
webdunia
webdunia

ಬೆಳಗಿನ ಜಾವ ರೈಲಿಗೆ ನುಗ್ಗಿ ಪ್ರಯಾಣಿಕರನ್ನ ದೋಚಿದ ಡಕಾಯಿತರು

Dacoits
ಲಕನೌ , ಭಾನುವಾರ, 9 ಏಪ್ರಿಲ್ 2017 (12:19 IST)
ಚಲಿಸುತ್ತಿದ್ದ ರೈಲಿಗೆ ನುಗ್ಗಿದ ಡಕಾಯಿತರ ಪ್ರಯಾಣಿಕರ ಬಳಿ ನಗನಾಣ್ಯ ಲೂಟಿ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಪುರ್ ಬಳಿಯ ಗಹ್ಮಾರ್ ರೈಲು ನಿಲ್ದಾಣ ಬಳಿ ನಡೆದಿದೆ.

ರೈಲು ತಾಂತ್ರಿಕ ದೋಷದಿಂದ ನಿಂತಾಗ ಬೆಳಗಿನ ಜಾವ 3.30ರ ಸುಮಾರಿಗೆ ಟ್ರೈನಿಗೆ ನುಗ್ಗಿದ ಮೇಲೆ ಹಲ್ಲೆ ನಡೆಸಿದ್ದಾರೆ. ಹತ್ತಾರು ಡಕಾಯಿತರು ಬಂದೂಕು ತೋರಿಸಿ ನಗನಾಣ್ಯ ದೋಚಿದ್ದಾರೆ. ವಿರೋಧಿಸಿದವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬದೌರ್ ನಿಲ್ದಾಣದ ಬಳಿ ಇಳಿದು ಪರಾರಿಯಾಗಿದ್ದಾರೆ. ಬೆಳಗ್ಗೆ 7 ಗಂಟೆಗೆ ಟ್ರೇನ್ ಪಾಟ್ನಾಗೆ ಬರುತ್ತಿದ್ದಂತೆ ರೈಲ್ವೆ ಭದ್ರತಾಧಿಕಾರಿಗಳ ವಿರುದ್ಧ ಪ್ರಯಾಣಿಕರು ಮುಗಿಬಿದ್ದಿದ್ದಾರೆ.
 

ಟ್ರೇನ್ ಅಟೆಂಡೆಂಟ್ ಡಕಾಯಿತಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪ್ರಯಾಣಿಕರು ಡಕಾಯಿತಿಗೆ ಸಹಕರಿಸಲು ಆತನೇ ಕೋಚ್ ಬಾಗಿಲು ತೆರೆದಿದ್ದಾರೆಂದು ಹೇಳಿದ್ದಾರೆ.

ಈ ಕುರಿತು ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಡಕಾಯಿತಿಯರ ಪತ್ತೆ ಹಚ್ಚಿ ಕಠಿಣ ಕ್ರಮ ಮತ್ತು ಪ್ರಯಾಣಿಕರ ಭದ್ರತೆಗೆ ಕ್ರಮ ಕೂಗೊಳ್ಳುವಂತೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಮಲ್ಯ ವಿಲ್ಲಾ 73 ಕೋಟಿ ರೂಪಾಯಿಗೆ ಸೇಲ್?