Webdunia - Bharat's app for daily news and videos

Install App

ಸೈಬರ್ ವಂಚನೆ: ಎಚ್ಚರ ಗ್ರಾಹಕರೇ... ಎಚ್ಚರ!

Webdunia
ಮಂಗಳವಾರ, 7 ಡಿಸೆಂಬರ್ 2021 (11:19 IST)
ನವದೆಹಲಿ : ಸೈಬರ್ ವಂಚನೆ ಮಾಡಿದ್ದ ಆರೋಪದ ಮೇಲೆ ರಾಜಸ್ಥಾನದ ಇಬ್ಬರು ವ್ಯಕ್ತಿಗಳನ್ನು ನವದೆಹಲಿಯಲ್ಲಿ ಬಂಧಿಸಲಾಗಿದೆ.
ಮೆಹಂದಿ ಹಸನ್ ಅಲಿಯಾಸ್ ಹರ್ಪಾಲ್ ಸಿಂಗ್ (43) ಮತ್ತು ಎಂಡಿ ಅರ್ಬಾಜ್ ಖಾನ್ (20) ಬಂಧಿತ ಆರೋಪಿಗಳು. ಇವರು ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಅಂತರಾಜ್ಯ ಗುಂಪಿನ ಸದಸ್ಯರಾಗಿದ್ದರು. ಇತ್ತೀಚೆಗಷ್ಟೇ ಗುಂಪಿನ ಮಾಸ್ಟರ್ ಮೈಂಡ್ ಆಗಿದ್ದ ಆಫ್ರಿಕನ್ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
ವಂಚಕರ ಗುಂಪು ಪ್ರತಿಷ್ಠಿತ ಕಂಪನಿಗಳನ್ನು ಗುರಿಯಾಗಿಸಿಕೊಂಡಿತ್ತು. ಕಂಪನಿಗಳ ಉನ್ನತ ಅಧಿಕಾರಿಗಳ ಇಮೇಲ್ನಂತೆ ಕಾಣುವ ರೀತಿ ನಕಲಿ ಮೇಲ್ಗಳನ್ನು ಕಳಿಸಿ ಜನರಿಗೆ ಮೊಸ ಮಾಡುತ್ತಿದ್ದರು. ಜೊತೆಗೆ ನಕಲಿ ಮೇಲ್ ಐಡಿಗಳನ್ನು ತಯಾರಿಸಿದ್ದರು. ಈ ರೀತಿ ಮಾಡಿ ಸುಮಾರು 80 ಲಕ್ಷ ರೂ. ವಂಚನೆಯನ್ನು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಆರೋಪಿಗಳು ಬ್ಯಾಂಕ್ಗೆ ನಕಲಿ ಚಾಲ್ತಿ ಖಾತೆಗಳಿಗೆ ಹಣ ವರ್ಗಾಯಿಸಲು ಸುಳ್ಳು ಪತ್ರವನ್ನು ನೀಡಿದ್ದಾರೆ. ಹಣವನ್ನು ಹಲವಾರು ಖಾತೆಗಳಿಗೆ ವರ್ಗಾಯಿಸಿ ಎಟಿಎಂನಿಂದ ಮತ್ತೆ ಹಿಂಪಡೆಯುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments