Select Your Language

Notifications

webdunia
webdunia
webdunia
webdunia

ಆಪರೇಷನ್ ಸಿಂಧೂರ ಬಗ್ಗೆ ಟೀಕೆ: ವಿದ್ಯಾರ್ಥಿನಿ ವಿರುದ್ಧದ ಕ್ರಮದ ಬಗ್ಗೆ ಹೈಕೋರ್ಟ್ ತರಾಟೆ

ಖದೀಜಾ ಶೇಖ್

Sampriya

ಮುಂಬೈ , ಗುರುವಾರ, 29 ಮೇ 2025 (15:30 IST)
Photo Credit X
ಮುಂಬೈ: ‘ಆಪರೇಷನ್ ಸಿಂಧೂರ’ ಮೂಲಕ ಭಯೋತ್ಪಾದಕರ ವಿರುದ್ಧ ಹೋರಾಡಿದ ಭಾರತದ ಕ್ರಮವನ್ನು ಟೀಕಿಸಿ ಬಂಧಿಯಾಗಿದ್ದ ಪುಣೆಯ ಯುವತಿ  ಜಾಮೀನು ಪಡೆದು ಇದೀಗ ಸೆಮಿಸ್ಟರ್ ಪರೀಕ್ಷೆ ಬರೆದಿದ್ದಾರೆ.

ಮಹಾರಾಷ್ಟ್ರ ವಿದ್ಯಾರ್ಥಿ ವಿರುದ್ಧ ಕೈಗೊಂಡ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಈ ಕ್ರಮವು ಆಘಾತಕಾರಿ ಮತ್ತು ತೀವ್ರವಾದದ ಕ್ರಮವಾಗಿದೆ.
ವಿದ್ಯಾರ್ಥಿನಿಯ ಭವಿಷ್ಯ ಹಾಳು ಮಾಡಲು ಮುಂದಾಗಿರುವ ಪೊಲೀಸರು, ಆಕೆಯನ್ನು ದೊಡ್ಡ ಅಪರಾಧಿ ಎಂಬಂತೆ ಬಿಂಬಿಸಿದ್ದಾರೆ ಎಂದಿದೆ.


ಅದಲ್ಲದೆ ಈ ಪ್ರಕರಣದ ಬಳಿಕ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ತಾತ್ಕಾಲಿಕವಾಗಿ ಹೊರಹಾಕಿದ ಸಿನ್ಹ್‌ಗಡ್‌ ಅಕಾಡೆಮಿ ಎಂಜಿನಿಯರಿಂಗ್ ಕಾಲೇಜಿನ ವಿರುದ್ಧವೂ ಹರಿಹಾಯ್ದಿದೆ.

ಕಾಲೇಜಿನ ಕ್ರಮಕ್ಕೆ ತಡೆ ನೀಡಿದೆ. 2ನೇ ವರ್ಷದ ಸೆಮಿಸ್ಟರ್‌ ಪರೀಕ್ಷೆಗೆ ಹಾಜರಾಗಲು ನ್ಯಾ. ಗೌರಿ ಗೋಡ್ಸೆ ಮತ್ತು ನ್ಯಾ. ಸೋಮಶೇಖರ್ ಸುದರ್ಶನ್‌ ಅವರಿದ್ದ ರಜಾಕಾಲದ ವಿಭಾಗೀಯ ಪೀಠವು ಅನುಮತಿ ನೀಡಿತು.

ಹೈಕೋರ್ಟ್‌ನ ಆದೇಶದಂತೆ ಯರವಾಡ ಜೈಲಿನಲ್ಲಿದ್ದ ವಿದ್ಯಾರ್ಥಿನಿಯನ್ನು ಬಿಡುಗಡೆ ಮಾಡಿ, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಕೀಲೆ ಫರ್ಹಾನ್‌ ಶಾ ತಿಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಟ್ರಂಪ್‌ಗೆ ಕೈಕೊಟ್ಟ ಎಲಾನ್ ಮಸ್ಕ್‌: ಡೊನಾಲ್ಡ್‌ ಗೆಲುವಿಗೆ ಟೊಂಕಕಟ್ಟಿದ್ದ ಬಿಲಿಯನೇರ್ ಮುನಿಸಿಗೆ ಕಾರಣವೇನು