Webdunia - Bharat's app for daily news and videos

Install App

ಕೊವಿಶೀಲ್ಡ್ ನಿಂದ ಅಡ್ಡಪರಿಣಾಮಗಳಿವೆ ಎಂದು ಒಪ್ಪಿಕೊಂಡ ಕಂಪನಿ

Krishnaveni K
ಮಂಗಳವಾರ, 30 ಏಪ್ರಿಲ್ 2024 (10:24 IST)
Photo Courtesy: Twitter
ನವದೆಹಲಿ: ಕೊರೋನಾ ರೋಗಕ್ಕೆ ಲಸಿಕೆಯಾಗಿ ಬಳಸಲಾಗುತ್ತಿದ್ದ ಕೋವಿಶೀಲ್ಡ್ ನಿಂದ ಅಡ್ಡಪರಿಣಾಮಗಳಿವೆ ಎಂಬುದನ್ನು ಈಗ ಸ್ವತಃ ತಯಾರಕ ಕಂಪನಿಯೇ ಒಪ್ಪಿಕೊಂಡಿದೆ.

ಕೊರೋನಾ ಔಷಧಿಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಇದನ್ನು ಒಪ್ಪಿಕೊಂಡಿದೆ. ಆಸ್ಟ್ರೆಜೆನೆಕಾ ಲಸಿಕೆ ಪಡೆದ ಬಳಿಕ ಮೆದುಳು, ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್ ಲೆಟ್ ಕಡಿಮೆಯಾಗುವುದು ಇತ್ಯಾದಿ ಅಡ್ಡಪರಿಣಾಮಗಳು ಬರಬಹುದು ಎಂದು ಕಂಪನಿಯೇ ಒಪ್ಪಿಕೊಂಡಿದೆ.

ಬ್ರಿಟನ್ ನಿವಾಸಿ ಜೆಮಿ ಸ್ಕಾಟ್ ಕೊವಿಶೀಲ್ಡ್ ಔಷಧಿಯಿಂದ ಪ್ಲೇಟ್ ಲೆಟ್ ಗಳ ಸಂಖ್ಯೆ ಕಡಿಮೆಯಾಗುವುದು ಎಂದು ದೂರು ನೀಡಿದ್ದರು. ವಿಚಾರಣೆ ಸಂದರ್ಭದಲ್ಲಿ ಕೆಲವೊಂದು ಪ್ರಕರಣಗಳಲ್ಲಿ ಹೀಗಾಗುವುದು ಇದೆ ಎಂದು ಕಂಪನಿಯೇ ಒಪ್ಪಿಕೊಂಡಿದೆ. ಇದರ ಬಗ್ಗೆ ವಿಸ್ತ್ರೃತ ಅಧ್ಯಯನದ ಅಗತ್ಯವಿದೆ ಎಂದಿದೆ.

ಆಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದಲ್ಲಿ ಸೀರಂ ಸಂಸ್ಥೆ ಕೊವಿಶೀಲ್ಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿತ್ತು. ಹೀಗಾಗಿ ಲಂಡನ್ ನಲ್ಲಿ ನಡೆದ ಈ ಪ್ರಕರಣ ಭಾರತದಲ್ಲೂ ಮಹತ್ವ ಪಡೆದುಕೊಂಡಿದೆ. ಕೊರೋನಾ ವ್ಯಾಕ್ಸಿನ್ ನಿಂದ ಅಡ್ಡಪರಿಣಾಮಗಳಿವೆ ಎಂದು ಹಲವರು ಪ್ರತಿಪಾದಿಸುತ್ತಿದ್ದರೂ ಕಂಪನಿಗಳು ಇದನ್ನು ಅಲ್ಲಗಳೆಯುತ್ತಲೇ ಬಂದಿದ್ದವು.

ರಕ್ತದ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಹೃದಯ ಸ್ತಂಭನವಾಗುವ ಸಾಧ‍್ಯತೆ ಹೆಚ್ಚು. ಕನ್ನಡ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಕೊರೋನಾ ಬಳಿಕ ಹಲವರು ಆರೋಗ್ಯವಂತರಾಗಿದ್ದರೂ ದಿಡೀರ್ ಆಗಿ ಹೃದಯಸ್ತಂಬನಕ್ಕೊಳಗಾಗಿ ಸಾವನ್ನಪ್ಪಿದ್ದರು. ಇದೆಲ್ಲಾ ಕೊರೋನಾ ವ್ಯಾಕ್ಸಿನ್ ಲಸಿಕೆಯ ಅಡ್ಡಪರಿಣಾಮಗಳು ಎಂದು ಕೆಲವರು ವಾದಿಸುತ್ತಿದ್ದರು. ಅದೀಗ ನಿಜವಾದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments