Select Your Language

Notifications

webdunia
webdunia
webdunia
webdunia

ಸುಳ್ಳು ಬಿಲ್ ನಿರಾಕರಿಸಿದ್ದಕ್ಕೆ ಅಧಿಕಾರಿಯ ಕೈ ಕತ್ತರಿಸಿದರು

ಸುಳ್ಳು ಬಿಲ್ ನಿರಾಕರಿಸಿದ್ದಕ್ಕೆ ಅಧಿಕಾರಿಯ ಕೈ ಕತ್ತರಿಸಿದರು
ಮಾಗಡಿ , ಗುರುವಾರ, 15 ಸೆಪ್ಟಂಬರ್ 2016 (15:09 IST)
ಸುಳ್ಳು ಬಿಲ್ ನಿರಾಕರಿಸಿದ್ದಕ್ಕಾಗಿ ಇಬ್ಬರು ಗುತ್ತಿಗೆದಾರರು ಸೇರಿ ಅಧಿಕಾರಿಯ ಕೈ ಕತ್ತರಿಸಿದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ತಾಳೆಕೆರೆ ಹ್ಯಾಂಡ್‌ಪೋಸ್ಟ್ ಬಳಿ ನಡೆದಿದೆ. 
 
ಆರೋಪಿಗಳನ್ನು ಕೇಶವ್ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಅವರಿಂದ ದಾಳಿಗೊಳಗಾಗಿರುವ ಅಧಿಕಾರಿಯನ್ನು  ಶ್ರೀನಿವಾಸ್ ಎಂದು ಗುರುತಿಸಲಾಗಿದೆ.
 
ಸೋಮವಾರ ದಿನ ಶಂಕಿತ ಆರೋಪಿಗಳಾದ ಕೇಶವ ಮತ್ತು ಮಂಜುನಾಥ  ಹೆಚ್. ಆರ್. ಶ್ರೀನಿವಾಸ್(53) ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಅವರ ಬಲಗೈಗೆ ಆಳವಾದ ಗಾಯವಾಗಿದೆ. ಅದೃಷ್ಟವಶಾತ್ ಕೈ ತುಂಡಾಗಿಲ್ಲ. ಸದ್ಯ ಶ್ರೀನಿವಾಸ್ ಬೆಂಗಳೂರಿನ ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 
ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಾಡೆಲ್ ವಿರುದ್ಧ ಅತ್ಯಾಚಾರ, ವಂಚನೆ ಕೇಸ್