ನವದೆಹಲಿ: ದೆಹಲಿಗೆ ಹೋಗುವ ವಂದೇ ಭಾರತ್ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ಸಾಮಕಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಸರ್ಕಾರ ಈ ವಿಡಿಯೋವನ್ನು ಹಂಚಿಕೊಂಡು, ವಂದೇ ಭಾರತ್ ರೈಲಿನೊಳಗೆ ಜಲಪಾತ..!
ಮೋದಿ ಸರ್ಕಾರದ ದುರಾಡಳಿತದಲ್ಲಿ ರೈಲ್ವೇ ಇಲಾಖೆಯ ದುಸ್ಥಿತಿ ಎಂದು ಬರೆದುಕೊಂಡಿದೆ.
ರೈಲ್ವೆ ದ್ವಾರದಿಂದ ನೀರು ಹರಿಯುತ್ತಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಈಗ ಅದು ವೈರಲ್ ಆಗಿದೆ.
ಪ್ರಯಾಣಿಕರೊಬ್ಬರು ಪೋಸ್ಟ್ನ್ನು ಹಂಚಿ, ವಂದೇಭಾರತ್ ರೈಲಿನಲ್ಲಿ ಎಸಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ನೀರಿನ ಸೋರಿಕೆ. ಪ್ರೀಮಿಯಂ ದರದ ಹೊರತಾಗಿಯೂ ಅತ್ಯಂತ ಅಹಿತಕರ ಪ್ರಯಾಣ. ಹಲವಾರು ದೂರುಗಳನ್ನು ಸಲ್ಲಿಸಲಾಗಿದೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಅದನ್ನು ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೊವು ಜನರಲ್ಲಿ ರೈಲುಗಳ ನಿರ್ವಹಣೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತು ಮತ್ತು ಅನೇಕರು ಸೇವೆಯನ್ನು ಟೀಕಿಸಿದರು. ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕನು ತನ್ನ ಟಿಕೆಟ್ಗೆ ಸಂಪೂರ್ಣ ಮರುಪಾವತಿಗೆ ಒತ್ತಾಯಿಸಿದನು.