ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಭರವಸೆಗಳನ್ನು ಮುರಿದ ಪೋಸ್ಟರ್ ಬಾಯ್' ಎಂದು ಹಂಗಿಸಿದ ಕಾಂಗ್ರೆಸ್ ವಿರುದ್ಧ ಪ್ರತಿ ದಾಳಿ ನಡೆಸಿರುವ ಬಿಜೆಪಿ, 'ಕಾಂಗ್ರೆಸ್ ನಾವಿಕ'ನಿಲ್ಲದೆ ಮುಳುಗುತ್ತಿರುವ ಹಡಗು ಎಂದಿದೆ.
ಮೋದಿ ಅವರ ಕಾರ್ಯನಿರ್ವಹಣೆ ವಿಶ್ವದಾದ್ಯಂತ ಹೊಗಳಿಕೆಗೆ ಪಾತ್ರವಾಗುತ್ತಿದ್ದುದರಿಂದ ಕಾಂಗ್ರೆಸ್ ಹತಾಶೆಗೆ ಜಾರಿದೆ. ಹಲವು ರಾಜ್ಯಗಳಲ್ಲಿ ಅದು ಬಂಡಾಯವನ್ನೆದುರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಎಲ್ಲೆಡೆ ಸೋಲುನ್ನು ಕಾಣುತ್ತಿದೆ. ಕಾಂಗ್ರೆಸ್ ಪಕ್ಷವೀಗ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗಾಗಿ ಬಿಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ ಶರ್ಮಾ ಟೀಕಿಸಿದ್ದಾರೆ.
ಮಾಡಿದ್ದ ವಾಗ್ದಾನದಂತೆ ಮೋದಿ ಸರ್ಕಾರ ತನ್ನ ಅಧಿಕಾರಾವಧಿಯ ಎರಡು ವರ್ಷದಲ್ಲಿ ಬಡವರ ಮತ್ತು ಕೃಷಿಕರ ಪರವಾಗಿ ಕೆಲಸ ಮಾಡಿದೆ ಎಂದವರು ಪ್ರತಿಪಾದಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.