Select Your Language

Notifications

webdunia
webdunia
webdunia
webdunia

ಸೋತರೆ ಸುಮ್ನೆ ಬಿಡಲ್ಲ ಸಿಎಂ ಕೇಜ್ರಿವಾಲ್ ಧಮ್ಕಿ!

ಸೋತರೆ ಸುಮ್ನೆ ಬಿಡಲ್ಲ ಸಿಎಂ ಕೇಜ್ರಿವಾಲ್ ಧಮ್ಕಿ!
NewDelhi , ಮಂಗಳವಾರ, 25 ಏಪ್ರಿಲ್ 2017 (11:15 IST)
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಕಳೆದು ಬಿಜೆಪಿ ಬಹುಮತದೊಂದಿಗೆ ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಆದರೆ ಫಲಿತಾಂಶ ಹೀಗೇ ಬಂದರೆ ಧರಣಿ ಕೂರುವುದಾಗಿ ಸಿಎಂ ಕೇಜ್ರಿವಾಲ್ ಎಚ್ಚರಿಸಿದ್ದಾರೆ.

 
ಇಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆಯಿಂದಾಗಿ ಬಿಜೆಪಿ ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಆರೋಪಿಸಿದ್ದ ಕೇಜ್ರಿವಾಲ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತಯಂತ್ರ ಬಳಸಬಾರದೆಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದರು. ಆದರೆ ಅದನ್ನು ಆಯೋಗ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ.

ಇದೀಗ ಈ ಚುನಾವಣೆಯಲ್ಲೂ ಬಿಜೆಪಿ ಗೆದ್ದರೆ ಪ್ರಬಲ ಪ್ರತಿಭಟನೆಗೆ ಮುಂದಾಗುವುದಾಗಿ ಅವರು ಎಚ್ಚರಿಸಿದ್ದಾರೆ. ಎಎಪಿ ಚಳವಳಿಯ ಮೂಲಕವೇ ಹುಟ್ಟಿಕೊಂಡ ಪಕ್ಷ. ಅಗತ್ಯ ಬಂದರೆ ಮತ್ತೆ ಹೊಸ ಆಂದಲೋನ ನಡೆಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸುಕ್ಮಾ ದಾಳಿ ನಡೆಸಿದವರಲ್ಲಿ ಬಹುಪಾಲು ಮಹಿಳೆಯರು!