ಹಿರಿಯೂರು ತಾಲ್ಲೂಕನ್ನು ಶೌಚಮುಕ್ತಗೊಳಿಸಬೇಕೆಂದು ಕಳೆದ ಎರಡು ತಿಂಗಳ ಹಿಂದೆ ಪ್ರತಿಭಟನೆ ಕುಳಿತಿದ್ದ 8ನೇ ತರಗತಿ ವಿದ್ಯಾರ್ಥಿನಿ ಲಾವಣ್ಯ ತನಗೆ ನೀಡಲಾಗಿದ್ದ ಭರವಸೆ ಹುಸಿಯಾಗಿದ್ದರಿಂದ ಮತ್ತೆ ಉಪವಾಸ ಸತ್ಯಾಗ್ರವನ್ನು ಆರಂಭಿಸಿದ್ದಾಳೆ.
ಹೇಮದಳ ಗ್ರಾಮದ ವಿದ್ಯಾರ್ಥಿನಿಯಾದ ಲಾವಣ್ಯ ತನಗೆ ಬಯಲು ಮಲವಿಸರ್ಜನೆಗೆ ಹೋಗಲು ಮುಜುಗರವಾಗುತ್ತಿದೆ. ನಮ್ಮ ಗ್ರಾಮದಲ್ಲಿ ಎಲ್ಲ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದ್ದಳು. ಇದಕ್ಕೆ ಸ್ಪಂದಿಸಿದ್ದ ಜಿಲ್ಲಾಡಳಿತ ಮೊದಲ ಹಂತವಾಗಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಲು ಕಾರ್ಯಾದೇಶ ಪತ್ರ ಕೊಡಿಸಿತ್ತು.
ಲಾವಣ್ಯಳ ಸಾಮಾಜಿಕ ಪ್ರಜ್ಞೆ ಗುರುತಿಸಿ ಅನೇಕ ಪ್ರಶಸ್ತಿಗಳ ಬಂದಿದ್ದವು. ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ್ ಸಹ ಲಾವಣ್ಯಳ ಮನೆಗೆ ಬಂದು ಪುರಸ್ಕರಿಸಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಬಾಲೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ್ದರು.
ಆದರೆ ಭರವಸೆ, ಆದೇಶ ಹುಸಿಯಾಗಿದ್ದು ಮತ್ತೆ ಲಾವಣ್ಯ ಪ್ರತಿಭಟನೆಯನ್ನು ಆರಂಭಿಸಿದ್ದಾಳೆ. ತನ್ನೆಲ್ಲ ಪ್ರತಿಭಟನೆಯನ್ನು ಹಿಂದಕ್ಕೆ ನೀಡಿ ಭರವಸೆ ಹುಸಿಯಾದುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಹೊಗಳಿಕೆ, ಬಿರುದು ಬೇಕಾಗಿಲ್ಲ. ಸೌಚಾಲಯ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾಳೆ.
ಮತ್ತಿಗ ಲಾವಣ್ಯಳ ಮನ ಒಲಿಸುವ ಪ್ರಯತ್ನ ಮಾಡಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ನವೆಂಬರ್ 18ರವರೆಗೆ ಸಮಯ ಕೊಡಲು ಕೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ