Publish Date: Sat, 25 Jul 2026 (17:30 IST)
Updated Date: Sat, 25 Jul 2026 (17:32 IST)
ನವದೆಹಲಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ರಾಜೀAನಾಮೆ ಸಲ್ಲಿಸಿದ ನಂತರ, 'ಕಾಕ್ರೋಚ್ ಜನತಾ ಪಾರ್ಟಿ' (CJP) ಶನಿವಾರದಂದು ತಮ್ಮ ಮೂರು ಬೇಡಿಕೆಗಳನ್ನು ಲಿಖಿತವಾಗಿ ಒಪ್ಪಿಕೊಳ್ಳುವಂತೆ ಆಗ್ರಹಿಸಿತು ಮತ್ತು ಸಂಜೆ ಕ್ಯಾಂಡಲ್ ಮಾರ್ಚ್ (ಮೇಣದಬತ್ತಿ ಮೆರವಣಿಗೆ) ನಡೆಸಲು ಕರೆ ನೀಡಿತು.
ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದನ್ನು CJP ವಕ್ತಾರ "ಸಾಮಾನ್ಯ ಮನುಷ್ಯನ ಗೆಲುವು" ಎಂದು ಬಣ್ಣಿಸಿದರು.
CJPಯ ಮೂರು ಬೇಡಿಕೆಗಳಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ಆತ್ಮಹತ್ಯೆ ಮಾಡಿಕೊಂಡ NEET ಆಕಾಂಕ್ಷಿಗಳ ಕುಟುಂಬಗಳಿಗೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾದ ಎಫ್ಐಆರ್ಗಳನ್ನು (FIR) ಹಿಂಪಡೆಯುವುದು ಸೇರಿವೆ.
ರಂಕಾ ANIಗೆ ಹೀಗೆ ಹೇಳಿದರು: "ಇದು ದೇಶದ ಭವಿಷ್ಯದ ಗೆಲುವು, ಸಾಮಾನ್ಯ ಮನುಷ್ಯನ ಗೆಲುವು... ನಮ್ಮ ಮೂರು ಬೇಡಿಕೆಗಳನ್ನು ಲಿಖಿತವಾಗಿ ಒಪ್ಪಿಕೊಂಡರೆ, ನಾವು ಮನೆಗೆ ಮರಳುತ್ತೇವೆ. ದೇಶಾದ್ಯಂತ ಶಾಂತಿಯುತ ಕ್ಯಾಂಡಲ್ ಮಾರ್ಚ್ ನಡೆಸಲು ನಾವು ಅನುಮತಿ ಕೋರಿದ್ದೇವೆ. ಸಂಜೆ 6:00 ಗಂಟೆಗೆ ಎಲ್ಲರೂ ದೇಶಾದ್ಯಂತ ಕ್ಯಾಂಡಲ್ ಮಾರ್ಚ್ ನಡೆಸಬೇಕು."
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ