Webdunia - Bharat's app for daily news and videos

Install App

ಮದುವೆ ನಂತರವು ಕ್ರಿಕೆಟ್ ಆಡಲು ಕಳಿಸಬೇಕು ಎಂದು ಬಾಂಡ್ ಸಹಿ ಹಾಕಿಸಿಕೊಂಡ ವರನ ಸ್ನೇಹಿತರು

Webdunia
ಭಾನುವಾರ, 11 ಸೆಪ್ಟಂಬರ್ 2022 (15:39 IST)
ಮದುವೆ ಮನೆಯಲ್ಲಿ ವಾರಾಂತ್ಯದಲ್ಲಿ ವರನಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ವಧುವಿನ ಕಡೆಯಿಂದ ವರನ ಸ್ನೇಹಿತರು ಬಾಂಡ್ ಬರೆಸಿಕೊಂಡಿದ್ದಾರೆ. 
 
ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿ ನಡೆದ ವಿವಾಹ ಸಮಾರಂಭ ಇಂತಹ ವಿಚಿತ್ರ ಹಾಗೂ ಅಚ್ಚರಿಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೀಳ ಪುದೂರಿನ ನಿವಾಸಿ ಹರಿಪ್ರಸಾದ್ ಹಾಗೂ ಪೂಜಾ ಆಗಷ್ಟೇ ಹಸೆಮಣೆ ಏರಿ ವೇದಿಕೆಗೆ ಬಂದಿದ್ದರು. ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹರಿಪ್ರಸಾದ್, ಸ್ಥಳೀಯ ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದ ನಾಯಕರಾಗಿದ್ದಾರೆ.
 
ಹೀಗಾಗಿಯೇ ಹರಿಪ್ರಸಾದ್ ಮದುವೆಗೆ ಕ್ರಿಕೆಟ್​ ತಂಡದ ಸದಸ್ಯರು ಹಾಗೂ ಸ್ನೇಹಿತರು ಬಂದಿದ್ದರು. ವೇದಿಕೆ ಮೇಲೆ ಬಂಧು ಮಿತ್ರರು ನವದಂಪತಿಗೆ ಶುಭಾಶಯ ಕೋರುವ ಕಾರ್ಯದಲ್ಲಿ ನಿರತರಾಗಿದ್ದರೆ, ಕ್ಲಬ್‌ನ ಆಟಗಾರರು ವರನ ಸ್ನೇಹಿತರ ವಧು ಪೂಜಾ ಕೈಗೆ ಒಂದು ಬಾಂಡ್​ ಪೇಪರ್​ ನೀಡಿದ್ದಾರೆ. ಈ ವೇಳೆ ಪೂಜಾ ತನಗೆ ಏನೋ ಚೇಷ್ಟೆ ಮಾಡಲು ಹೊರಟಿದ್ದಾರೆ ಎಂದುಕೊಂಡಿದ್ದರು. 
ಆದರೂ, ವರನ ಸ್ನೇಹಿತರು ಪಟ್ಟು ಬಿಡದೇ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಪೂಜಾರನ್ನು ಒತ್ತಾಯಿಸಿದ್ದಾರೆ. ಅಂತೆಯೇ, ಪೂಜಾ ಸಹಿ ಹಾಕಿದ ತರುವಾಯವೇ ವಾರಾಂತ್ಯದಲ್ಲಿ ಗಂಡನಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ಕ್ರಿಕೆಟ್ ಕ್ಲಬ್‌ನೊಂದಿಗೆ ಐದು ಸಾಲಿನ ಒಪ್ಪಂದ ಮಾಡಿಕೊಂಡಿರುವುದು ಗೊತ್ತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments