Select Your Language

Notifications

webdunia
webdunia
webdunia
webdunia

ವಯನಾಡಿನಲ್ಲಿ ಇನ್ನೂ ಪತ್ತೆಯಾಗುತ್ತಲೇ ಇದೆ ದೇಹದ ಒಂದೊಂದು ಭಾಗಗಳು, ಡಿಎನ್‌ಎ ಪರೀಕ್ಷೆಯಲ್ಲಿ ಸಿಗಲಿದೆ ನಿಖರ ಸಾವಿನ ಸಂಖ್ಯೆ

ವಯನಾಡಿನಲ್ಲಿ ಇನ್ನೂ ಪತ್ತೆಯಾಗುತ್ತಲೇ ಇದೆ ದೇಹದ ಒಂದೊಂದು ಭಾಗಗಳು, ಡಿಎನ್‌ಎ ಪರೀಕ್ಷೆಯಲ್ಲಿ ಸಿಗಲಿದೆ ನಿಖರ ಸಾವಿನ ಸಂಖ್ಯೆ

Sampriya

ವಯನಾಡ್ , ಮಂಗಳವಾರ, 13 ಆಗಸ್ಟ್ 2024 (17:23 IST)
ವಯನಾಡ್: ಭೀಕರ ಭೂಕುಸಿತ ಸಂಭವಿಸಿದ ಚೂರಲ್ಮಲಾ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ತಾತ್ಕಾಲಿಕವಾಗಿ ನಾಪತ್ತೆಯಾದವರ ಶೋಧ ಕಾರ್ಯವನ್ನು ನಿಲ್ಲಿಸಲಾಗಿದೆ.

ಇನ್ನೂ ಇಂದು ಬೆಳಗ್ಗೆ ಚಾಲಿಮಾರ್ ನದಿಯ ದಡದಲ್ಲಿ ಸೇನೆ, ವಿಶೇಷ ಕಾರ್ಯಾಚರಣೆ ತಂಡ, ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆಯು ನಡೆಸಿದ ಶೋಧ ಕಾರ್ಯ ನಡೆಸಿತ್ತು.  ಈ ಶೋಧದ ವೇಳೆ ವಯನಾಡಿನ ವೆಲ್ಲರ್ಮಲಾ ಮತ್ತು ಥಲಪ್ಪಲಿ ಪ್ರದೇಶಗಳು ಮತ್ತು ಮಲಪ್ಪುರಂನ ಕುಂಪಲಪ್ಪಾರದಲ್ಲಿ ಇನ್ನೂ ಮೂರು ದೇಹದ ಭಾಗಗಳು ಪತ್ತೆಯಾಗಿವೆ.

ಡಿಎನ್‌ಎ ಪರೀಕ್ಷೆಯ ಫಲಿತಾಂಶ ಬಂದ ನಂತರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಖಚಿತವಾಗಲಿದೆ ಎಂದು ಕಂದಾಯ ಸಚಿವ ಕೆ.ರಾಜನ್‌ ಮನೋರಮಾ ಸುದ್ದಿಗೆ ತಿಳಿಸಿದ್ದಾರೆ.

ಪ್ರಸ್ತುತ 405 ಮೃತ ದೇಹಗಳು ಮತ್ತು ದೇಹದ ಭಾಗಗಳ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪರೀಕ್ಷೆಗಳ ಫಲಿತಾಂಶಗಳು ಮೂರು ದಿನಗಳಲ್ಲಿ ನಿರೀಕ್ಷಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಪತ್ತೆಯಾದ ದೇಹಗಳು ಮತ್ತು ದೇಹದ ಭಾಗಗಳ ಡಿಎನ್‌ಎ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಸಚಿವರು ಹೇಳಿದರು.

ನಾಪತ್ತೆಯಾಗಿರುವ 90 ಜನರ ರಕ್ತದ ಮಾದರಿಗಳನ್ನು ಇಲ್ಲಿಯವರೆಗೆ ಸಂಗ್ರಹಿಸಲಾಗಿದೆ. ಡಿಎನ್ಎ ಮಾದರಿಗಳೊಂದಿಗೆ ಹೊಂದಾಣಿಕೆಗಾಗಿ ಇದನ್ನು ಕಳುಹಿಸಲಾಗುತ್ತದೆ. ಡಿಎನ್‌ಎ ಪರೀಕ್ಷೆಯ ಫಲಿತಾಂಶ ಬಂದ ನಂತರ ನಾಪತ್ತೆಯಾದವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಸಚಿವರು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ದುಡ್ಡು ಕೊಟ್ಟು ಬಂದವ ಡ್ಯಾಂ ಏನಾಗಿದೆ ಅಂತಾ ನೋಡ್ತಾನ: ಕಾಂಗ್ರೆಸ್ ವಿರುದ್ಧ ಗುಡುಗಿದ ಕುಮಾರಸ್ವಾಮಿ