Select Your Language

Notifications

webdunia
webdunia
webdunia
webdunia

ವಿದೇಶಗಳಲ್ಲಿರುವ ಕಪ್ಪು ಹಣ ಮರಳಿ ತರಬಹುದು: ಸುಬ್ರಹ್ಮಣ್ಯಂ ಸ್ವಾಮಿ

ಕಪ್ಪು ಹಣ
ನವದೆಹಲಿ , ಬುಧವಾರ, 19 ಆಗಸ್ಟ್ 2015 (16:10 IST)
ವಿದೇಶಿ ಬ್ಯಾಂಕ್‌ಗಳಲ್ಲಿರುವ 125 ಲಕ್ಷ ಕೋಟಿ ಕಪ್ಪು ಹಣವನ್ನು ಭಾರತ ಸರಕಾರ ಮರಳಿ ತರಬಹುದಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಅಮೆರಿಕದ ವರ್ಜಿನಿಯಾ ಪ್ರದೇಶದಲ್ಲಿ ಇಂಡಿಯನ್- ಅಮೆರಿಕನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನನಗೆ ತುಂಬಾ ಚೆನ್ನಾಗಿ ಮಾಹಿತಿಯಿರುವುದರಿಂದ ಅವರು ಕಪ್ಪು ಹಣ ಸ್ವದೇಶಕ್ಕೆ ಮರಳಿ ತರುತ್ತಾರೆ. ಸರಕಾರ ಕಪ್ಪು ಹಣ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದರು.
 
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಶೃದ್ಧಾಂಜಲಿ ಅರ್ಪಿಸಿ ಲೀಡ್ ಇಂಡಿಯಾ 2020 ಎನ್ನುವ ಕಾರ್ಯಕ್ರಮದಲ್ಲಿ ಸ್ವಾಮಿ ಭಾಷಣ ಮಾಡಿದ್ದಾರೆ.
 
ಭಾರತ ದೇಶಕ್ಕೆ ಶೇ.12 ರಷ್ಟು ಅಭಿವೃದ್ಧಿ ದರವನ್ನು ಹೊಂದುವ ಸಂಪ್ನಮೂಲವಿದೆ. ಜನತೆಯನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದೆ. ಅಂತಹ ಯೋಜನಾ ನೀತಿಗಳನ್ನು ಜಾರಿಗೆ ತರಬೇಕಾಗಿದೆ ಎಂದರು.
 
ಪ್ರಧಾನಮಂತ್ರಿ ನರೇಂದ್ರ ಮೋದಿ ನವದೆಹಲಿಗೆ ಹೊಸಬರಾಗಿದ್ದಾರೆ. ಮತ್ತು ಅವರ ಸಲಹೆಗಾರರು ಹಳೆಯ ನೀತಿಗಳನ್ನು ಅನುಸರಿಸುವುರಾಗಿರುವುದು ಕಪ್ಪು ಹಣ ಮರಳಿ ತರುವುದಕ್ಕೆ ವಿಳಂಬವಾಗಿದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ತಿಳಿಸಿದ್ದಾರೆ.
 

Share this Story:

Follow Webdunia kannada